ಬಾಚೇನಹಳ್ಳಿ ಕೊಟ್ರೇಶ್ ಇನ್ನಿಲ್ಲ
Bachenahalli Kotresh passes away
ಕೊಟ್ಟೂರು 10: ಕೊಟ್ಟೂರು ನಗರದ ಕರಿಬಸವೇಶ್ವರ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯರ ಪುತ್ರ ಬಾಚೇನಹಳ್ಳಿ ಕೊಟ್ರೇಶ್ ್ಲ58್ವ ಇಂದು ಮೃತರಾಗಿರುತ್ತಾರೆ. ಮೃತರು ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು, ಮೃತರು ಕಳೆದ 4-5 ವರ್ಷಗಳಿಂದ ಕಾಯಿಲೆಗೆ ಬಿದ್ದು ಹಾಸಿಗೆ ಹಿಡಿದಿದ್ದರು, ಮೃತ ಬಾಚೇನಹಳ್ಳಿ ಕೊಟ್ರೇಶ್ ಥ್ಯಾಂಕ್ಸ್ ಚಲನಚಿತ್ರ ಸೇರಿದಂತೆ ಅನೇಕ ಚಲನಚಿತ್ರಗಳಿಗೆ ಫೈನಾನ್ಸರ್ ಅಗಿ ಹೆಸರು ಮಾಡಿದ್ದರು, ಮೃತರು ಒಂದು ಹೆಣ್ಣು ಮಗು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಕೊಟ್ಟೂರು ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ , ಮೂಲ ಕೊಟ್ಟೂರಿನವರಾಗಿದ್ದ, ಬಾಚೇನಹಳ್ಳಿ ವಿದ್ಯಾರ್ಥಿದೆಸೆ ಯಿದ್ದಾಗಲೇ ಸಾಮಾಜಿಕ ಹೋರಾಟವನ್ನು ಮೈಗೂಡಿಸಿಕೊಂಡಿದ್ದರು, ಕೊಟ್ಟೂರು ನಗರದಲ್ಲಿ 90ರ ದಶಕದಲ್ಲೇ ಎ..ಐ.ಎಸ್.ಎಫ್, ಎ.ಐ.ವೈ. ಎಫ್, ವಿದ್ಯಾರ್ಥಿ ಸಂಘಟನೆ ಮಾಡಿ ಆ ಮೂಲಕ, ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೇ, ಜಿಂದಾಲ್ ಉಕ್ಕು ಕಾರ್ಖಾನೆ ಸ್ಥಾಪನೆ ಮಾಡಲು ಸರ್ಕಾರದ ವಿರುದ್ಧ ಬೆಂಗಳೂರು ನಗರಕ್ಕೆ ಅನೇಕ ಬಾರಿ ಜಾಥ ಹೊರಡಿಸುತ್ತಿದ್ದರು, ಹುಟ್ಟು ಹೋರಾಟಗಾರರಾಗಿದ್ದ, ಮೃತರು, ಬೆಂಗಳೂರು ನಗರದಲ್ಲಿ ಎನ್.ಜಿ.ಓ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಹೋರಾಟ ಮಾಡುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ಕೊಟ್ಟೂರು ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತುಯೆಂದು ಮೃತ ಸಹೋದರ ಪುಲಿಕೇಶಿ ಮಲ್ಲಿಕಾರ್ಜುನ ಪ್ರಕಾಶ್ ಪತ್ರಿಕೆಗೆ ತಿಳಿಸಿದ್ದಾರೆ.
ಮೃತರ ಅತ್ಮಕ್ಕೆ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಿ ಶಾಂತಿ ನೆಲೆಸಲಿಯೆಂದು ಕಥೆಗಾರರಾದ ಕು.ವೀರಭದ್ರ್ಪ, ಪ್ರಾಣಿಪಕ್ಷಿ ಪ್ರಿಯ ತಜ್ಞ ಸಮದ್, ಬೆಣ್ಣಿ ಪ್ರಭಾಕರ, ಸುಧಾಕರಪಾಟೀಲ್, ಪತ್ರಕರ್ತ ಸಂಘದ ತಾಲ್ಲೂಕು ಆಧ್ಯಕ್ಷರು ಸೇರಿದಂತೆ ಕೋಗಳಿ ಗೌಡ್ರು , ಸೋಮಶೇಖರ, ಅಂಚೆ ಕೊಟ್ರೇಶ್, ಸೇರಿದಂತೆ ಅನೇಕರು ಅತ್ಮಕ್ಕೆ ಶಾಂತಿ ಕೋರಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 