ಫೆ. 15 ರಿಂದ ಬಬಲಾದಿ ಮಠದ ಜಾತ್ರಾಮಹೋತ್ಸವ
Babaladi Mutt Fair to be held from Feb. 15
ಲೋಕದರ್ಶನ ವರದಿ
ಜಮಖಂಡಿ 10: ತಾಲ್ಲೂಕಿನ ಆಲಗೂರ ಪುನರ್ವಸತಿ ಕೇಂದ್ರದಲ್ಲಿನ ಹೊಸ ಬಬಲಾದಿ ಮಠದ ಜಾತ್ರಾಮಹೋತ್ಸವ ಫೆ. 15 ರಿಂದ 18 ವರಗೆ ಜರುಗಲಿದೆ ಎಂದು ಮಠದ ಶಿವರುದ್ರಯ್ಯ ಮುತ್ಯಾ ತಿಳಿಸಿದರು.
ಆಲಗೂರ ಪುರ್ನವಸತಿ ಕೇಂದ್ರದ ಹೊಸ ಬಬಲಾದಿ ಮಠದಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದರು, ಫೇ.15 ರಂದು ಸಂಜೆ 4 ಗಂಟೆಗೆ ಸದಾಶಿವ ಮುತ್ಯಾರ ಭಾವಚಿತ್ರ ಮೆರವಣಿಗೆ ಬನಶಂಕರಿ ತೋಟದ ವಿಠ್ಠಲ ಮಂದಿರದಿಂದ ಜಮಖಂಡಿ ನಗರದ ಪ್ರಮುಖ ರಸ್ತೆ ಮೂಲಕ ಸಂಚರಿಸುವುದು. ಮೆರವಣಿಗೆಯಲ್ಲಿ ಕುಂಬಹೊತ್ತ ಮಹಿಳೆಯರು ವಿವಿಧ ವಾದ್ಯ ಮೇಳಗಳು ಸೇರಲಿವೆ. 16 ರಂದು ಮಠದ ಉಪಾಸನೆ, ಶಿವಭಜನೆ, ಬಯಲಾಟಗಳು ಜರುಗುತ್ತವೆ. 17 ರಂದು ಮುಂಜಾನೆ 5 ಗಂಟೆಗೆ ಮಠದಲ್ಲಿ ರುದ್ರಾಭೀಷಕ, ಶಿವದಿಕ್ಷೇ, ಲಿಂಗದಿಕ್ಷೇ ನೀಡಲಾಗುವದು. ರಾತ್ರಿ ಮಠದ ರಥೋತ್ಸವ ಜರುಗಿದ ಬಳಿಕ ತುಲಾಭಾರ ಕಾರ್ಯಕ್ರಮ ನಡೆಯುತ್ತದೆ. 18 ರಂದು ಮುಂಜಾನೆ 10 ಗಂಟೆಗೆ ಮಹಾಪ್ರಸಾದೊಂದಿಗೆ ತ್ರಿಕಾಲ ಜ್ಞಾನ ಕಾಲಜ್ಞಾನ ನುಡಿಯನ್ನು ಸಾರಲಾಗುತ್ತದೆ. ನಂತರ ತೇರದ ಬಂಡಿಗಳ ಸ್ಪರ್ಧೆ, ಸಾಯಂಕಾಲ ಲಕ್ಷ ದೀಪೋತ್ಸವ ನಡೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಠದ ಪೀಠಾಧಿಕಾರಿ ಸದಾಶಿವ ಅಜ್ಜನ್ನವರು ಹಾಗೂ ಮಠದ ಭಕ್ತಾದಿಗಳಾದ ತುಕಾರಾಮ ಮೋರೆ, ಯಂಕಪ್ಪ ಕುಂದಗೋಳ, ಶಿವಪ್ಪ ಕಡಪಟ್ಟಿ, ಹಣಮಂತ ಬೀಳಗಿ, ಪ್ರಜ್ವಳ ಸೊನ್ನಹಳ್ಳಿ, ಮಾದೇವ ನ್ಯಾಮಗೌಡ, ಹಣಮಂತ ಹಳೇಮನಿ, ಭೀಮಪ್ಪ ದೇವರಮನಿ, ರಮೇಶ ಭೂಮಾರ, ಪ್ರಜ್ವಲ ರಜಪೂತ, ಗಂಗಪ್ಪ ಪೂಜಾರಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 