ಆಂತರಿಕ ಅಪಾಯಗಳ ಜಾಗೃತಿ ಕಾರ್ಯ ಶ್ಲಾಘನೀಯ
Awareness work on internal threats is commendable
ಲೋಕದರ್ಶನ ವರದಿ
ಮಹಾಲಿಂಗಪುರ 27 : ವಿದ್ಯಾರ್ಥಿ ಜೀವನ ಬಂಗಾರವಿದ್ದ ಹಾಗೆ ಆದರೆ ಎಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ಡ್ರಗ್ ಚಟಕ್ಕೆ ಬಿದ್ದು ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಂಡು ಹೆತ್ತವರು, ಸಮಾಜ ಮತ್ತು ದೇಶಕ್ಕೆ ಕಂಟಕವಾಗುತ್ತಾರೆ ಎಂದು ಹೆಡ್ ಕಾನ್ಸ್ಟೇಬಲ್ ವೈ.ವೈ.ಗಚ್ಚನ್ನವರ ಹೇಳಿದರು.
ಸ್ಥಳೀಯ ಜೆಸಿ ಶಾಲೆಯಲ್ಲಿ ಸರ್ಕಾರ ಮತ್ತು ಪೋಲೀಸ್ ಇಲಾಖೆಯ ಆಶ್ರಯದಲ್ಲಿ ಜರುಗಿದ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಡ್ರಗ್ ಎಂಬುದು ಕೆಲವೊಮ್ಮೆ ನೇರವಾಗಿ ಇನ್ನು ಕೆಲವೊಮ್ಮೆ ನಮಗೆ ಅರಿವಿಲ್ಲದೆಯೇ ಮಕ್ಕಳ ಕೈಗೆ ಸಿಗಬಹುದು ಉದಾಹರಣೆಗೆ ಮಕ್ಕಳು ಉಪಯೋಗಿಸುವ ಸೀಸದ ಕಡ್ಡಿ, ವೈಟ್ನರ್ ಮುಂತಾದ ವಸ್ತುಗಳಲ್ಲಿ ಡ್ರಗ್ ಅಂಶವಿದ್ದು ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುವ ಸಂದರ್ಭವಿರುತ್ತದೆ.
ಮಕ್ಕಳು ತಂಬಾಕು, ಗುಟ್ಕಾ, ಮುಂತಾದ ಮಾದಕ ವ್ಯಸನಗಳಿಂದ ದೂರವಿರಿ. ಯಾರಾದರೂ ತಮ್ಮ ಸ್ನೇಹಿತರು ಮಾದಕ ವ್ಯಸನಕ್ಕೆ ಬಲಿಯಾಗಿದ್ದರೆ ಇಲಾಖೆಯ ಆದೇಶದಂತೆ ಶಾಲೆಯ ಸೂಚನಾ ಫಲಕದಲ್ಲಿಅಂಟಿಸಿರುವ ಸ್ಕ್ಯಾನರ್ ಬಳಸಿ ಇಲಾಖೆಗೆ ಮಾಹಿತಿ ನೀಡಿ, ಮಾಹಿತಿದಾರರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 