ರಸ್ತೆ ನಿಯಮಾವಳಿ ಮತ್ತು ಅತಿ ವೇಗದ ಚಾಲನೆ ಕುರಿತಾಗಿ ಜಾಗೃತಿ ಅಭಿಯಾನ

ರಸ್ತೆ ನಿಯಮಾವಳಿ ಮತ್ತು ಅತಿ ವೇಗದ ಚಾಲನೆ ಕುರಿತಾಗಿ ಜಾಗೃತಿ ಅಭಿಯಾನ Awareness campaign on road rules and speeding

ಧಾರವಾಡ 27: ನಗರದ ವಿದ್ಯಾಗಿರಿಯ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಧಾರವಾಡ ಸಂಚಾರ ಪೋಲಿಸ್ ಠಾಣೆಯ ವತಿಯಿಂದ ವೇಗದ ಚಾಲನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಸಂಚಾರ ಠಾಣೆ ಪಿ.ಎಸ್‌.ಐ  ವೀರೇಶ ಬಳ್ಳಾರಿಯವರು ವಿದ್ಯಾರ್ಥಿಗಳಿಗೆ ರಸ್ತೆ ನಿಯಮಾವಳಿ ಹಾಗೂ ಅತಿವೇಗದ ಚಾಲನೆ ಕುರಿತಾಗಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ  ಎಸ್‌. ಬಿ. ಶಿಂಧೆ, ಮಹೇಶ ಉಪಸ್ಥಿತರಿದ್ದರು. ವಿನಾಯಕ ಗವಳಿ ನಿರೂಪಿಸಿದರು, ಮಂಜುನಾಥ ಚಟ್ಟೇರ ವಂದಿಸಿದರು.