ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ

ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ Awareness campaign against corruption

ಹುಬ್ಬಳ್ಳಿ 18: ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಎರಡೂ ಘಟಕಗಳ ಸಹಯೋಗದಲ್ಲಿ ಇಂದು ಪಿ.ಯು ಸಭಾಂಗಣದಲ್ಲಿ  ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. 

ಈ ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸವನ್ನು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹುಬ್ಬಳ್ಳಿ ವಕೀಲರಾದ ಮಂಗಳ ಗೌರಿ ವಿಶೇಷ ಉಪನ್ಯಾಸ ನೀಡಿದರು. ಪೋಕ್ಸು ಕಾಯ್ದೆ ಕುರಿತು  ಹಾಗೂ  ಭ್ರಷ್ಟಾಚಾರದ ವಿರುದ್ಧ ಜಾಗೃತಿಯನ್ನು ನಮ್ಮ ರಾಷ್ಟ್ರೀಯ  ಸ್ವಯಂಸೇವಕರಿಗೆ ವಿವರಿಸಿದ್ದರು. 

ಈ ಕಾರ್ಯಕ್ರಮದಲ್ಲಿ   ಕಾಲೇಜಿನ ಪ್ರಾಚಾರ್ಯರಾದ  ಸಂದೀಪ್ ಬೂದಿಹಾಳ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ  ಸಿ. ವೈ. ಹೊಸಮನಿ ಶ್ರೀಮತಿ ಕೆ.ಎಸ್‌. ಬೇಲೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಉಪನ್ಯಾಸಕರಾದ ಬಿ ಹೆಚ್ ದಳವಾಯಿ ಡಾ. ಅಶೋಕ್ ಗಡಾದ್  ಎಸ್‌.ಬಿ ಮಾಸಗೋನೆ ಎನ್‌.ಡಿ ಹಾದಿಮನಿ ಎಸ್‌.ಎ ನಾಯ್ಕರ್ ಭಾಗವಹಿಸಿದ್ದರು ಕಾರ್ಯಕ್ರಮವನ್ನು  ಉಪನ್ಯಾಸಕರಾದ  ಕೆ.ಬಿ ಕುರಿಯವರು ನಿರೂಪಿಸಿದರು.