ಆ.26 : ವೀರಭದ್ರ ದೇವರ ಉದ್ಭವ ಮಹೋತ್ಸವ
August 26: Birth anniversary of Lord Veerabhadra
ಧಾರವಾಡ, 24 : ಮನುಕುಲಕ್ಕೆ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಸಂಸ್ಕಾರ ಅರುಹಿದ ನೈತಿಕ ಶಕ್ತಿಯಾದ ಶ್ರೀವೀರಭದ್ರ ದೇವರು ನಮ್ಮ ಸಂಸ್ಕೃತಿಯ ವಿಶಿಷ್ಟ ಶಕ್ತಿ ಸೌಧ. ಈ ದೇವಶಕ್ತಿಯ ಮಹಾ ಅವತಾರವಾದದ್ದು ಭಾದ್ರಪದ ಮಾಸದ ಮೊದಲ ಮಂಗಳವಾರ. ಪ್ರಸ್ತುತ ಆಗಷ್ಟ-26 ರಂದು ರಾಷ್ಟ್ರವ್ಯಾಪಿಯಾಗಿ ಶೃದ್ಧಾ-ಭಕ್ತಿಯಿಂದ ಎಲ್ಲೆಡೆ ವೀರಭದ್ರ ದೇವರ ಉದ್ಭವ ಮಹೋತ್ಸವ ಆಚರಣೆಗೆ ಭಕ್ತಗಣ ಸಜ್ಜುಗೊಂಡಿದೆ.
ಶಿವನ ಸ್ಮರಣೆಯಲ್ಲಿ ಶಿವರಾತ್ರಿ, ಶಕ್ತಿಮಾತೆ ಶ್ರೀದೇವಿಯ ಸ್ಮರಣೆಯಲ್ಲಿ ನವರಾತ್ರಿ, ಮಹಾಲಕ್ಷ್ಮಿಯ ಸ್ಮರಣೆಯಲ್ಲಿ ದೀಪಾವಳಿ, ವಿಘ್ನೇಶ್ವರನ ಸ್ಮರಣೆಯಲ್ಲಿ ಶ್ರೀಗಣೇಶ ಚತುರ್ಥಿ ಹಬ್ಬಗಳನ್ನು ಆಚರಿಸುವಂತೆಯೇ ಶ್ರೀವೀರಭದ್ರ ದೇವರ ಉದ್ಭವ ಮಹೋತ್ಸವಕ್ಕೂ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿ ಭಕ್ತಿಯ ನೆಲೆಯಲ್ಲಿ ಆಚರಿಸಬೇಕೆಂದು ನಿರ್ಧರಿಸಲಾಗಿದೆ.
ಆಗಷ್ಟ-26 ರಂದು ರಾಜ್ಯದ ಎಲ್ಲಾ ಭಕ್ತರು ತಮ್ಮ ಮನೆ, ಮಠ ಮತ್ತು ಮಂದಿರಗಳಲ್ಲಿ ವೀರಭದ್ರ ದೇವರ ಉದ್ಭವ ಮಹೋತ್ಸವದ ಅಂಗವಾಗಿ ರುದ್ರಾಭಿಷೇಕ ಮಹಾಪೂಜೆ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಪಲ್ಲಕ್ಕಿಉತ್ಸವ, ದಾಸೋಹಸೇವೆಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ, ಉಪಾಧ್ಯಕ್ಷ ಗುರುಮೂರ್ತಿ ಯರಗಂಬಳಿಮಠ, ಇತರೇ ಪದಾಧಿಕಾರಿಗಳಾದ ರಮೇಶ ಉಳ್ಳಾಗಡ್ಡಿ, ಪಿ. ಎಂ. ಚಿಕ್ಕಮಠ, ಗೀರೀಶಕುಮಾರ ಬುಡರಕಟ್ಟಿಮಠ, ಪ್ರಕಾಶ ಅಂದಾನಿಮಠ ಮುಂತಾದವರು ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 