ವಿಶ್ವಶಾಂತಿಗಾಗಿ ಅತಿ ರುದ್ರ ಕಾರ್ಯಕ್ರಮ

ವಿಶ್ವಶಾಂತಿಗಾಗಿ ಅತಿ ರುದ್ರ ಕಾರ್ಯಕ್ರಮ Ati Rudra program for world peace

ಲೋಕದರ್ಶನ ವರದಿ 

ಬೆಳಗಾವಿ 04:  ನಗರದ  ಗುರುಪ್ರಸಾದ ಕಾಲೋನಿಯ ದತ್ತ ಮಂದಿರದಲ್ಲಿ ಇತ್ತೀಚೆಗೆ ಆರು ದಿನಗಳ ಕಾಲ ಅತಿ ರುದ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎರಡು ದಶಕಗಳ ನಂತರ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಎಪ್ಪತ್ತಕ್ಕೂ ಹೆಚ್ಚು ರುದ್ರ ಪಾಠಕರು ಪಾಲ್ಗೊಂಡಿದ್ದರು.  ಪ್ರತಿದಿ  ಐದು ಗಂಟೆಗಳ ಕಾಲ ರುದ್ರ ಪಠಣವನ್ನು ಮಾಡಿದರು.   

ಚಂದ್ರಶೇಖರ ಜೋಶಿ ಹಾಗೂ  ಬೋಂದ್ರೆ ಗುರುಗಳು ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೋಮ ಹವನ ರುದ್ರ ಸ್ವಾಹಾಕಾರ ಕಾರ್ಯಕ್ರಮಗಳು ನೆರವೇರಿದವು . ಸಾಗರ ಕೆರೂರ, ದರ್ಶನ ಕುಲಕರ್ಣಿ, ವಿನಾಯಕ ಒಡೆಯರ. ಸಂತೋಷಾಚಾರ್ಯ ಜೋಶಿ , ವಿನಾಯಕ ಮುತಾಲಿಕ ದೇಸಾಯಿ , ಯೋಗೇಶ್, ಗಣೇಶ್ ಫಡಕೆ, ಸಂಜೀವ ಕುಲಕರ್ಣಿ,  ಚಿದಂಬರ ಮುನವಳ್ಳಿ , ರಮೇಶ ದೀಕ್ಷಿತ್, ಶಾರ್ದೂಲ ಗುರೂಜಿ ,  ಭಾವು ಜೋಶಿ , ಅರ್ಚಕರಾದ ಮಹೇಶ್ ಹಿರೇಹಳ್ಳಿ ,. ಉದ್ಯೋಗಪತಿ ರವಿ ಕಾಟವಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.   

ಬೆಳಗಾವಿಯ ವಿಪ್ರವೃಂದದವರೇ ಒಬ್ಬರಿಗೊಬ್ಬರ ಸಹಕಾರದಿಂದ ಈ ಅನುಷ್ಠಾನ ಮಾಡಿದ್ದು ವಿಶೇಷವಾಗಿತ್ತು. ಸಮಸ್ತ ಭಕ್ತ ಜನರ ದುಃಖಗಳು ದೂರಾಗಿ ನೆಮ್ಮದಿ ಸಿಗಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.