ವಿಶ್ವಶಾಂತಿಗಾಗಿ ಅತಿ ರುದ್ರ ಕಾರ್ಯಕ್ರಮ
Ati Rudra program for world peace
ಲೋಕದರ್ಶನ ವರದಿ
ಬೆಳಗಾವಿ 04: ನಗರದ ಗುರುಪ್ರಸಾದ ಕಾಲೋನಿಯ ದತ್ತ ಮಂದಿರದಲ್ಲಿ ಇತ್ತೀಚೆಗೆ ಆರು ದಿನಗಳ ಕಾಲ ಅತಿ ರುದ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎರಡು ದಶಕಗಳ ನಂತರ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಎಪ್ಪತ್ತಕ್ಕೂ ಹೆಚ್ಚು ರುದ್ರ ಪಾಠಕರು ಪಾಲ್ಗೊಂಡಿದ್ದರು. ಪ್ರತಿದಿ ಐದು ಗಂಟೆಗಳ ಕಾಲ ರುದ್ರ ಪಠಣವನ್ನು ಮಾಡಿದರು.
ಚಂದ್ರಶೇಖರ ಜೋಶಿ ಹಾಗೂ ಬೋಂದ್ರೆ ಗುರುಗಳು ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೋಮ ಹವನ ರುದ್ರ ಸ್ವಾಹಾಕಾರ ಕಾರ್ಯಕ್ರಮಗಳು ನೆರವೇರಿದವು . ಸಾಗರ ಕೆರೂರ, ದರ್ಶನ ಕುಲಕರ್ಣಿ, ವಿನಾಯಕ ಒಡೆಯರ. ಸಂತೋಷಾಚಾರ್ಯ ಜೋಶಿ , ವಿನಾಯಕ ಮುತಾಲಿಕ ದೇಸಾಯಿ , ಯೋಗೇಶ್, ಗಣೇಶ್ ಫಡಕೆ, ಸಂಜೀವ ಕುಲಕರ್ಣಿ, ಚಿದಂಬರ ಮುನವಳ್ಳಿ , ರಮೇಶ ದೀಕ್ಷಿತ್, ಶಾರ್ದೂಲ ಗುರೂಜಿ , ಭಾವು ಜೋಶಿ , ಅರ್ಚಕರಾದ ಮಹೇಶ್ ಹಿರೇಹಳ್ಳಿ ,. ಉದ್ಯೋಗಪತಿ ರವಿ ಕಾಟವಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿಯ ವಿಪ್ರವೃಂದದವರೇ ಒಬ್ಬರಿಗೊಬ್ಬರ ಸಹಕಾರದಿಂದ ಈ ಅನುಷ್ಠಾನ ಮಾಡಿದ್ದು ವಿಶೇಷವಾಗಿತ್ತು. ಸಮಸ್ತ ಭಕ್ತ ಜನರ ದುಃಖಗಳು ದೂರಾಗಿ ನೆಮ್ಮದಿ ಸಿಗಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 