ವಿಜಯಪುರ 05: ಅಶೋಕ ಬ್ರಾಹ್ಮಣ, ಜೈನ, ಬೌದ್ಧ ಸೇರಿದಂತೆ ಆಗಿನ ಎಲ್ಲಾ ಮತಗಳಿಗೂ ದಾನ- ದತ್ತಿಗಳನ್ನು ಕೊಟ್ಟಿದ್ದಾನೆ, ಇದನ್ನು ಅವನ ಶಾಸನಗಳೇ ಹೇಳುತ್ತವೆ ಎಂದು ಕಶೀರ ಮಾಗಧ ಕಾದಂಬರಿಗಳ ಖ್ಯಾತಿಯ ಲೇಖಕಾರದ ಸಹನಾ ವಿಜಯಕುಮಾರ್ ಹೇಳಿದರು.
ಶನಿವಾರ ದಿನಾಂಕ 4 ರಂದು ನಗರದ ಶುಭಶ್ರೀ ಸಾಗರ ಹಾಲ್ ನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ' ಆಯೋಜನೆ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಅಶೋಕ ಸಾಮ್ರಾಜ್ಯ ಕಂದಹಾರದಿಂದ ಹಿಡಿದು ಸುವರ್ಣಗಿರಿ ಅಂದರೆ ಇವತ್ತಿನ ಉತ್ತರ ಕರ್ನಾಟಕದ ಭಾಗದವರೆಗೂ ಇತ್ತು. ಅಶೋಕನ ಅತಿ ಹೆಚ್ಚು ಶಾಸನ ಸಿಕ್ಕಿರುವುದು ನಮ್ಮ ಕರ್ನಾಟಕದಲ್ಲಿಯೇ. ಡೇರಿಯಸ್ ನ ಪ್ರಭಾವ ಅಶೋಕ ಶಾಸನಗಳ ಬರೆಸಲು ಪ್ರಾರಂಭಿಸಿದ. ಡೇರಿಯಸ್ ಅಂತಿಯೇ ಅಶೋಕ ಎತ್ತರವಾದ ಬಂಡೆಗಳಲ್ಲಿ ಶಾಸನಗಳನ್ನು ಬರೆಸಿದ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ವಹಿಸಿದ್ದರು. ನಿರೂಪಣೆ ರಾಹುಲ್ ಮರಳಿ, ಸ್ವಾಗತ ಪರಿಚಯ - ವರಣು ಸೋಲಾಪುರ , ವಂದನಾರೆ್ಣ ವಿವೇಕ ಕುಲಕರ್ಣಿ ನಿರ್ವಹಿಸಿದರು. ಸುಧೀಂದ್ರ ಟಂಕಸಾಲೆ , ರವೀಂದ್ರ ಹಲ್ಯಾಳ , ಶರಣು ಹೀರಾಪುರ, ಬಿ ಜೆ ಪುರಾಣಿಕ , ಶಶಿಧರ ಸಾತಿಹಾಳ , ಕೃಷ್ಣ ದೀಕ್ಷಿತ್, ಜಿ ಆರ್ ಕುಲಕರ್ಣಿ, ಅಂಬಾದಾಸ ಜೋಶಿ , ಕೃಷ್ಣ ಬೀಡಕರ , ಸಂಗಮೇಶ ಪೂಜಾರಿ, ಓಂಕಾರ ಅರ್ಥರ್ಗಾ , ಶಂಕರ್ ಕುಲಕರ್ಣಿ , ಎನ್ ಆರ್ ಕುಲಕರ್ಣಿ, ಎಸ್ ಎಮ್ ಕನಬೂರ , ಅನಿಲ ಮಾಶಾಳಕರ , ಶರಣಗೌಡ ಪಾಲೀಟ , ಸವಿತಾ ಸರಾಫ್ , ವೀರಣ್ಣ ನಾಯ್ಕೋಡಿ , ಡಾ.ಆರ್ ಎ ಕುಲಕರ್ಣಿ , ಶ್ರೀರಂಗ ಪುರಾಣಿಕ, ಜಯಶ್ರೀ ಜೋಶಿ , ಪ್ರಿಯಾ ಹರಿದಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.