ಕಲಾವಿದ ಮಂಜುನಾಥಗೌಡರಿಗೆ ‘ಕಲ್ಯಾಣ ಕಲಾಸಿರಿ’ ಗೌರವ
Artist Manjunatha Gowda honored with 'Kalyana Kalasiri'
ಲೋಕದರ್ಶನ ವರದಿ
ಕಲಾವಿದ ಮಂಜುನಾಥಗೌಡರಿಗೆ ‘ಕಲ್ಯಾಣ ಕಲಾಸಿರಿ’ ಗೌರವ
ದಾರವಾಡ 03: ದಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ತ್ರಿ ವಿಧ ದಾಸೋಹಿ ಪೂಜ್ಯ ಲಿಂ. ಬಸವಣ್ಣಜ್ಜನವರ ಪುಣ್ಯಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಸಮಾರಂಭದ ಅಂಗವಾಗಿ ಹುಬ್ಬಳ್ಳಿಯ ಖ್ಯಾತ ಕಲಾವಿದ ಮಂಜುನಾಥಗೌಡ ಪಾಟೀಲರಿಗೆ ‘ಕಲ್ಯಾಣ ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಂದಗೋಳದ ಕಲ್ಯಾಣಪುರ ಮಠದ ಬಸವಣ್ಣಜ್ಜ ಶ್ರೀಗಳು ಕಲಾವಿದ ಮಂಜುನಾಥಗೌಡರ ದೀರ್ಘಕಾಲದ ಕಲಾಸೇವೆಯನ್ನು ಮೆಚ್ಚಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು (ಮೂರುಸಾವಿರ ಮಠ, ಹುಬ್ಬಳ್ಳಿ), ನವಲಿಂಗ ಮಹಾಸ್ವಾಮಿಗಳು, ಪ್ರಭುದೇವ ಜ್ಞಾನ ಕೇಂದ್ರದ ಸಂತೆ ಕಡೂರು ಶಿವಮೊಗ್ಗ, ಸರೂ್ಭಷಣ ಸ್ವಾಮಿಗಳು, ಗದಿಗೆಯ ಸ್ವಾಮಿಗಳು, ರಾಚೋಟೇಶ್ವರ ಸ್ವಾಮಿಗಳು, ಪ್ರವಚನಕಾರ ಗವಿಸಿದ್ದೇಶ್ವರ ಶಾಸ್ತ್ರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮವು ಭಕ್ತಿಭಾವ ಹಾಗೂ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 