ಅಪಘಾತದ ಕಪ್ಪು ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮ: ಸಚಿವ ಜಾರಕಿಹೊಳಿ

ಅಪಘಾತದ ಕಪ್ಪು ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮ: ಸಚಿವ ಜಾರಕಿಹೊಳಿ  Appropriate safety measures at accident black spots: Minister Jarkiholi

ಕಾರವಾರ  21:  ಹುಬ್ಬಳ್ಳಿ ವಾಕರಸಾ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆದು ಅಪಘಾತ ಕಪ್ಪು ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.  ಅವರು ಬುಧವಾರ, ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಗೆ ಭೇಟಿ ಮಾತನಾಡಿದರು.  

ವಾಕರಸಾ ಸಂಸ್ಥೆಯ ಭದ್ರತಾ ಮತ್ತು ಜಾಗೃತ ಇಲಾಖೆಯಿಂದ ಸರ್ವೆ ಮಾಡಿ ಗುರುತಿಸಲಾಗಿರುವ ಅಪಘಾತ ಕಪ್ಪು ಸ್ಥಳ (ಂಛಿಛಿಜಜಟಿಣ ಃಟಚಿಛಿಞ ಖಠಿಠ) ಕುರಿತು ಅಗತ್ಯ ಸುರಕ್ಷತಾ ಕ್ರಮ ಮತ್ತು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.  

ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಸಂಸ್ಥೆಯಿಂದ ಸರ್ವೆ ಮಾಡಿ ಗುರುತಿಸಲಾದ ಅಪಘಾತ ಕಪ್ಪು ಸ್ಥಳಗಳ ಕುರಿತು ಸಚಿತ್ರವಾಗಿರುವ ಸರ್ವೆ ದಾಖಲಾತಿಗಳನ್ನು ವಿವರಿಸಿ ವಿಷಯವನ್ನು ಸಚಿವರ ಗಮನಕ್ಕೆ ತಂದರು.   ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಹನುಮನ್ನವರ ಹಾಗೂ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಗಣೇಶ ರಾಠೋಡ ಉಪಸ್ಥಿತರಿದ್ದರು.