ಕರ್ನಾಟಕ ಯುವ ಗರ್ಜನೆ ಸಂಘಟನೆಯ ನೂತನ ವಿವಿಧ ಘಟಕ ಪದಾಧಿಕಾರಿಗಳ ನೇಮಕ

ಕರ್ನಾಟಕ ಯುವ ಗರ್ಜನೆ ಸಂಘಟನೆಯ ನೂತನ ವಿವಿಧ ಘಟಕ ಪದಾಧಿಕಾರಿಗಳ ನೇಮಕ Appointment of new office bearers of various units of Karnataka Yuva Garjane Sangathan

ವಿಜಯಪುರ 10: ರವಿವಾರ ದಿನಾಂಕ 9-11-2025 ರಂದು ಕರ್ನಾಟಕ ಯುವಗರ್ಜನೆ ಸಂಘಟನೆಯ ನೂತನ ಪದಾಧಿಕಾರಿಗಳ ನೇಮಕ ವಿಜಯಪುರ ಸರಕಾರಿ ಪ್ರವಾಸ ಮಂದಿರದಲ್ಲಿ ಕರ್ನಾಟಕ ಯುವಗರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷರು ಬಸವರಾಜ ಮ ಖಂಡೇಕರ ಅವರು ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಮಹಿಳಾ ಘಟಕದ ಉಪಾಧ್ಯಕ್ಷ ಮಹಿಳಾ ಘಟಕ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ನೇಮಕ ಮಾಡಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕ ಯುವಗರ್ಜನೆ ಬರಿ ಕನ್ನಡ ಪರ ಅಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದರು ನಂತರ ಪ್ರಕಾಶ ಮಿರ್ಜಿ ಕರ್ನಾಟಕ ಯುವಗರ್ಜನೆ ಸಂಘಟನೆಯ ಗೌರವಾಧ್ಯಕ್ಷರು ಮಾತನಾಡಿ ಕರ್ನಾಟಕ ಯುವಗರ್ಜನೆ ವಿಜಯಪುರ ಜಿಲ್ಲೆಯ ಕೆಲವೊಂದು ಭ್ರಷ್ಟಾಚಾರ ಮಾಡುವ ಅಧಿಕಾರಿಗಳ ಸಿಂಹ ಸ್ವಪ್ನ ಆಗಿದೆ ಎಂದರು ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಆಶಿಪ್ ತಾಳಿಕೋಟಿ ಮಹೇಶ್ ವಠಾರ ಸಂತೋಷ ಡಮನಾಳ ಹಾಗೂ ಅಸ್ಪಾಕ್ ದಪೇದಾರ್ ಉಪಸ್ಥಿತರಿದ್ದರು.