ಸಾಮೂಹಿಕ ವಿವಾಹ, ಉಪನಯನಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ನೇಮಕ

ಸಾಮೂಹಿಕ ವಿವಾಹ, ಉಪನಯನಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ನೇಮಕ Appointment of Office Bearers of Mass Marriage, Upanayana Program Committee

ಸಾಮೂಹಿಕ ವಿವಾಹ, ಉಪನಯನಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ನೇಮಕ 

ಗದಗ 16:- ಅವಳಿ ನಗರವಾದಗದಗ ಬೆಟಗೇರಿ ಶಹರದ ಪ್ರತಿಷ್ಠಿತಕ್ರಾಂತಿ ಸೇನಾ,  ಶ್ರೀ ಜಗದಂಬಾ ಸೇವಾ ಸಮಿತಿ, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳ,  ಶ್ರೀ ಬಾಲ ಮಾರುತಿ ಸಮಿತಿ, ಇವುಗಳ ಸಂಯುಕ್ತಾಶ್ರಯದಲ್ಲಿಇದೇ  26/11/ 2025 ರಂದು ಜರುಗುವ ಉಚಿತ ಸಾಮೂಹಿಕ ವಿವಾಹ ಹಾಗೂ  ಉಪನಯನಕಾರ್ಯಕ್ರಮದ ಅಂಗವಾಗಿ ಗದಗ ನಗರದಗಂಗಾಪುರ ಪೇಟೆ  ವ ಖಾನತೋಟ್ ಬಡಾವಣೆಯಲ್ಲಿ ಸತತವಾಗಿ 4ನೇ ವರ್ಷದ  ಸಾಮೂಹಿಕ ವಿವಾಹ ಹಾಗೂ  ಉಪನಯನಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 

ಸಮಿತಿಯಗೌರವಾಧ್ಯಕ್ಷರಾಗಿ ಮಾಧುಸಾ ಹಾದಿಮನಿ, ಅಧ್ಯಕ್ಷರಾಗಿಉಮೇಶ್ ಹಬೀಬ್, ಉಪಾಧ್ಯಕ್ಷರಾಗಿ ಹನುಮತಸಾ ಸಿದ್ಲಿಂಗ್, ಗುರು ಬಾಕಳೆ, ಅಕ್ಷತಾ ಪವಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಾರಾಯಣ ನಿರಂಜನ,ಸಹ- ಕಾರ್ಯದರ್ಶಿಗಳಾಗಿ ನಾರಾಯಣಸಾಖಟವಟೇ, ಗೋದಾವರಿಕಬಾಡಿ, ಸಹಕಾರ್ಯದರ್ಶಿ ಶಂಕರಸಾ ಕಲಬುರ್ಗಿ ಸತೀಶ್ ಪೂಜಾರಿರಾಜು ಮೆರವಾಡೇ,  ಖಜಾಂಚಿ  ಬಾಬು ಬಾಕಳೆ, ಉಪ ಖಜಾಂಚಿ  ಮಂಜು ಕೆಂದೊಳ್ಳಿ, ಸ್ವಾಗತ ಸಮಿತಿಗುರು ಭಾಂಡಗೆ, ಪ್ರವೀಣ್ ಹಬೀಬ ಇವರುಗಳನ್ನು ಸಮಸ್ತ ಹಿರಿಯರ ಸಮ್ಮುಖದಲ್ಲಿಆಯ್ಕೆಮಾಡಲಾಗಿರುತ್ತದೆ.  

ಆಯ್ಕೆಯಾದ ಸಮಸ್ತ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಹಾಗೂ ಮಾರ್ಗದರ್ಶಕರಾಗಿ ಸಮಾಜದ  ಹಿರಿಯರನ್ನುಆಯ್ಕೆ  ಮಾಡಲಾಯಿತುಎಂದು ಪತ್ರಿಕಾ ಪ್ರಕಟಣೆ ಮುಖಾಂತರ  ಸಾಮೂಹಿಕ ವಿವಾಹ ಹಾಗೂ ಉಪನಯನ ಸಮಿತಿಯ ಸಂಸ್ಥಾಪಕರಾದ ಬಾಬು ಬಾಕಳೆ ತಿಳಿಸಿರುತ್ತಾರೆ.