ಕರವೇ ಉಸ್ತುವಾರಿ ಅಧ್ಯಕ್ಷರಾಗಿ ನಿಂಗಪ್ಪ ಜುಮ್ಮಣ್ಣವರ ನೇಮಕ

ಕರವೇ ಉಸ್ತುವಾರಿ ಅಧ್ಯಕ್ಷರಾಗಿ ನಿಂಗಪ್ಪ ಜುಮ್ಮಣ್ಣವರ ನೇಮಕ  Appointment of Ningappa Jummannavar as chairman

ಕೊಪ್ಪಳ 07: ಕರ್ನಾಟಕ ರಕ್ಷಣಾ ವೇದಿಕೆ ಪಿ.ಕೃಷ್ಣೇಗೌಡ ಸ್ವಾಭಿಮಾನಿ ಬಣದ ಕೊಪ್ಪಳ ತಾಲ್ಲೂಕು ಉಸ್ತುವಾರಿ ಅಧ್ಯಕ್ಷರನ್ನಾಗಿ ನಿಂಗಪ್ಪ ಜುಮ್ಮಣ್ಣವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರು ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಆದೇಶಿಸಿದ್ದಾರೆ.

ನಿಂಗಪ್ಪ ಜುಮ್ಮಣ್ಣವರ ಮೂಲತಃ ಕೊಪ್ಪಳ ತಾಲ್ಲೂಕಿನ ಹೈದರನಗರ ಗ್ರಾಮದವರಾಗಿದ್ದು, ಇವರ ಸಾಮಾಜಿಕ ಸೇವೆ ಪರಿಗಣಿಸಿ ತಾಯಿ ಶ್ರೀ ಭುವನೇಶ್ವರಿಯ ಹಾಗೂ ಈ ನಾಡಿನ ಸೇವೆಯನ್ನು ಮಾಡುವುದರ ಜೊತೆಗೆ ಸಂಘಟನೆಯನ್ನು ಬಲಪಡಿಸಲು ಸಂಪೂರ್ಣ ಅಧಿಕಾರವನ್ನು ನೀಡಲಾಗಿದ್ದು, ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ರಾಜ್ಯಾಧ್ಯಕ್ಷರಾದ ಪಿ.ಕೃಷ್ಣೇಗೌಡ ಅವರು ಪ್ರಕಟಣೆಯ ಮೂಲಕ ಶುಭ ಹಾರೈಸಿ ನೇಮಕಾತಿ ಆದೇಶ ವಿತರಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ, ಗದಗ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಹ್ಯಾಟಿ, ಸದಸ್ಯರಾದ ಮುತ್ತಣ್ಣ ಬಡಿಗೇರ, ಗುಡದಪ್ಪ ಹುಯಿಲಗೋಳ, ಬೀರ​‍್ಪ ಸತ್ಯಣ್ಣವರ, ತಿಪ್ಪಣ್ಣ ಕೊರಗಟ್ಟಿ ಇದ್ದರು.