ಗದಗ 29: ನಿಕಟಪೂರ್ವ ಗದಗ ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಜಿ ಎಮ್ ದಂಡಿನ ರವರ ಅಕಾಲಿಕ ಮರಣಾನಂತರ ಕಳೆದ ಹಲವಾರು ದಿನಗಳಿಂದ ತೆರವಾಗಿದ್ದ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕಾತಿ ಕುರಿತು ಇದೇ ದಿನಾಂಕ 27 ರಂದು ಮುಸ್ಲಿಂ ಸಮುದಾಯದ ಜಿ ಡಿ ಕಳಸಾಪೂರ ( ಜನಾಬ್ ಗುಲಾಮಹುಸೇನ್ ಡಿ ಕಳಸಾಪೂರ) ಇವರನ್ನು ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿರುತ್ತದೆ.ಎಂದು ಪತ್ರಿಕಾ ಪ್ರಕಟಣೆಗೊಂಡಿರುತ್ತದೆ.
ಆದರೆ ಸದರ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕಾತಿಯನ್ನು ಮಾಡಿ ಅಧಿಕೃತವಾಗಿ ಆದೇಶಿಸಲಾಗಿರುವುದಿಲ್ಲ. ಆ ಕುರಿತು ಯಾವುದೇ ಉಹಾಪೋಹಗಳಿಗೆ ಆಸ್ಪದ ನೀಡಬಾರದು ಹಾಗೂ ಸದರ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕವಾಗಿದೆ ಎಂದು ಸುಳ್ಳು ಹಾಗೂ ಬನಾವಟಿಯಿಂದ ಕೂಡಿದ ಸಂಗತಿಯಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರು ಹಾಗೂ , ,ನಗರಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ಉಪನಾಯಕರಾದ ಜನಾಬ್ ಬರಕತಅಲಿ ಮುಲ್ಲಾರವರು ಅಧಿಕೃತವಾಗಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಸಂಧರ್ಭದಲ್ಲಿ ಉಮರ್ ಫಾರೂಕ್ ಹುಬ್ಬಳ್ಳಿ, ಶಾರುಖ್ ಹುಯಿಲಗೋಳ, ಅನ್ವರ್ ಶಿರಹಟ್ಟಿ , ಮಾಜೀ ನಗರಸಭಾ ಸದಸ್ಯರಾದ ಅನಿಲ ಗರಗ, ಚಾಂದಸಾಬ್ ಕೊಟ್ಟೂರ್,ಗದಗ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ
ರಾಮಣ್ಣ ಹಬೀಬ್ ಡಾ,ಕಮಲಶಿ, ಎಸ್ ಕೊಡಬಿಂಗೆ ಬಸವರಾಜ ಕಡೆಮನಿ, ಶ್ರೀನಿವಾಸ್ ಹುಯಿಲಗೋಳ, ಮೋಹನ ದೊಡ್ಡಕುಂಡಿ, ಮಾರ್ತಾಠಪ್ಪ ಹಾದಿಮನಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.