ಸ್ಲಂ ಪ್ರದೇಶ ಜನರ ರಕ್ಷಣೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಸ್ಲಂ ಪ್ರದೇಶ ಜನರ ರಕ್ಷಣೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ Appeal to police chiefs for protection of slum dwellers


ಗದಗ 08: ಗದಗ-ಬೆಟಗೇರಿ ನಗರದ ವ್ಯಾಪ್ತಿಯಲ್ಲಿ ಬರುವ ರಿ.ಸ. ನಂ 594 ರಹಮತನಗರ ಹಾಗೂ ಗಂಗಿಂಡಿ ಮುಖ್ಯ ರಸ್ತೆಯಲ್ಲಿರುವ ನವನಗರ ಸ್ಲಂ ಪ್ರದೇಶದಲ್ಲಿ ಸುಮಾರು 78ಕ್ಕೊ ಹೆಚ್ಚು ಬಡವರು, ಕೊಲಿಕಾರ್ಮಿಕರು ವಾಸವಾಗಿದ್ದು, ಭೂ ಮಾಲಿಕ ಹಾಗೂ ಭೂ ಮಾಫೀಯಾಗಳು ಸ್ಥಳೀಯ ಬಡ ಜನರಿಗೆ ಒಕ್ಕಲೇಬ್ಬಸುವ ಕುತಂತ್ರ ನಡೆಸುತ್ತಿರುವುದನ್ನು ಖಂಡಿಸಿ ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಸ್ಥಳೀಯ ಜನರಿಗೆ ರಕ್ಷಣೆ ನೀಡಲು ಒತ್ತಾಯಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಕಾಜಾಸಾಬ ಇಸ್ಮಾಯಿಲನವರ, ನಾರಾಯಣ ಗಾಯಕವಾಡ, ಮೆಹಬೂಬ ಮುಲ್ಲಾ, ಗೌಸಸಾಬ ಅಕ್ಕಿ, ರಿಜ್ವಾನ ಮುಲ್ಲಾ, ಫಕ್ರುದ್ದಿನ ಕಿಲ್ಲೇದಾರ, ಬಸವರಾಜ ಕಳಸದ, ಶೇಖಪ್ಪ ಶೆಗಣಿ, ಖಾಜಾಸಾಬ ಉಮಚಗಿ, ವೆಂಕಟೇಶ ಬಿಂಕದಕಟ್ಟಿ ಹಾಗೂ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.