ದಾದರ್ ಪುದಚೇರಿ ಮೈಸೂರ್ ರೈಲು ನಿಲುಗಡೆಗೆ ಮನವಿ

ದಾದರ್ ಪುದಚೇರಿ ಮೈಸೂರ್ ರೈಲು ನಿಲುಗಡೆಗೆ ಮನವಿ Appeal for Dadar Pudacherry Mysore train stop

 

ರಾಯಬಾಗ 29:  ಸ್ಥಳೀಯ ರೈಲು ನಿಲ್ದಾಣದಲ್ಲಿ ಕರೋನಾ ಸಮಯದಲ್ಲಿ ನಿಲುಗಡೆ ನಿಲ್ಲಿಸಿದ ದಾದರ್ ಪುದುಚೆರಿ ತಿರುವಿನಲ್ಲವಿ  ದಾದರ್  ಮೈಸೂರ್ ಚಾಲುಕ್ಯ ಶರಾವತಿ ಎಕ್ಸ್ಪ್ರೆಸ್ ರೈಲುಗಳನ್ನು ಪುನಃ ನಿಲುಗಡೆ ಮಾಡುವಂತೆ ಬೆಳಗಾವಿ ಲೋಕಸಭಾ ಸದಸ್ಯರಾದ ಹಾಗೂ ಮಾಜಿ ಮುಖ್ಯಮಂತ್ರಿ ಗಳಾದ  ಜಗದೀಶ್ ಶೆಟ್ಟರ್  ಇವರಿಗೆ ಶುಕ್ರವಾರ  ಮನವಿ ಪತ್ರ ನೀಡಲಾಯಿತು. ಚಿಕ್ಕೋಡಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಮಾಜಿ ಉಪಾಧ್ಯಕ್ಷ ಅಣ್ಣಾಸಾಬ ಕುಲಗೂಡೆ, ಅಣ್ಣಾಸಾಬ ಹೋಣಕುಪ್ಪೆ, ವಸಂತ ಹೊಸಮನಿ, ಅಬ್ಬಾಸ ಲತಿಬನವರ ಉಪಸ್ಥಿತರಿದ್ದರು .