2024 - 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಮನವಿ
Appeal demanding the issuance of a cotton crop survey report and insurance compensation for the 2024
ಲೋಕದರ್ಶನ ವರದಿ
ವಿಜಯಪುರ 09 : ತಾಳಿಕೋಟಿ ತಾಲೂಕಿನಲ್ಲಿ 2024 / 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲೂಕಾ ಘಟಕ ತಾಳಿಕೋಟಿ ವತಿಯಿಂದ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕಾ ಅಧ್ಯಕ್ಷರಾದ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷರಾದ ರಾಮನಗೌಡ ಹಾದಿಮನಿ ಜಂಟಿಯಾಗಿ ಮಾತನಾಡಿ, 2024/25 ನೇ ಸಾಲಿನಲ್ಲಿ ತಾಳಿಕೋಟಿ ತಾಲೂಕಿನಾದ್ಯಂತ ಸಮಾರು 5000 ಕ್ಕಿಂತ ಹೆಚ್ಚು ರೈತರು ಬೆಳೆ ವಿಮೆಯಡಿ ನೋಂದಣಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಹತ್ತಿ ಬೆಳೆಗೆ ಸಂಬಂಧಿಸಿದಂತೆ ವಿಮಾ ಕಂಪನಿಯಿಂದ ಬೆಳೆ ಸಮೀಕ್ಷಾ ವರದಿಯೂ ಇಲ್ಲ ಮತ್ತು ಯಾವದೇ ವಿಮಾ ಪರಿಹಾರವು ಬಂದಿರುವುದಿಲ್ಲ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ವಿಮಾ ಕಂಪನಿಯ ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಕೂಡಲೇ ಮನವಿಗೆ ಸ್ಪಂದಿಸಿ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಮುಂಚೆ ಮನವಿ ನೀಡಲಾಗಿದೆ. ಜೂ. 15 ರ ವರೆಗೆ ಪರಿಹಾರ ನೀಡುವುದಾಗಿ ಓರಿಯಂಟಲ್ ವಿಮಾ ಕಂಪನಿಯವರು ಭರವಸೆ ನೀಡಿದ್ದಾರೆ. ಅದರಂತೆ ಪರಿಹಾರ ಕೊಡದಿದ್ದರೆ ಅವರ ಕಂಪನಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಶೋಕ ಉಪ್ಪಲದಿನ್ನಿ, ರಾಜು ವಾಲೀಕಾರ, ದೇಸಾಯಿ ಬೆನ್ನಟ್ಟಿ, ಅರುಣ ಕುಮಾರ ಪಾಟೀಲ, ನಾಗಪ್ಪ ಹಿರೂರ, ಮಾಳಪ್ಪ ಬೂದಿಹಾಳ, ಯಲ್ಲಪ್ಪ ಬಮ್ಮನಹಳ್ಳಿ, ಬಿ. ಜೆ. ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 