ಕೆರೆ ಸಂರಕ್ಷಣೆಗೆ ಒತ್ತಾಯಿಸಿ ಮನವಿ
Appeal demanding lake conservation
ತಾಳಿಕೋಟೆ 20: ಪಟ್ಟಣದ ಸರ್ವೆ ನಂಬರ್ 204ರಲ್ಲಿರುವ 11 ಎಕರೆ 03 ಗುಂಟೆ ಮುಪತ್ ಗಾಯರುಣ ಕೆರೆಯನ್ನು ಸಂರಕ್ಷಣೆ ಮಾಡಿ, ಅದರ ಅಭಿವೃದ್ಧಿಯನ್ನು ಮಾಡುವಂತೆ ಒತ್ತಾಯಿಸಿ ಕೆರೆಯ ಅಭಿವೃದ್ಧಿ ಸಾಮಾಜಿಕ ಹೋರಾಟಗಾರರಾದ ಸಿದ್ದಾರ್ಥ ಕಟ್ಟಿಮನಿ, ನಾಗಪ್ಪ ದಂಡಿನವರ, ಮಡಿವಾಳಪ್ಪ ಲಾಳಸಂಗಿ ಹಿರೂರ ಅವರು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೆರೆಯ ಹೊರಗಿನ ಸರಹದ್ದಿನಿಂದ 30 ಮೀಟರ್ ಒಳಗೆ ಅಕ್ರಮ ಮತ್ತು ಅನಧಿಕೃತವಾಗಿ ನಿರ್ಮಾಣವಾಗಿರುವ ಮನೆಗಳು, ವಾಣಿಜ್ಯ ಸಂಕೀರ್ಣಗಳನ್ನು ತೆರವುಗೊಳಿಸಿ ಪರಿಸರ ದೃಷ್ಟಿಯಿಂದ ಕೆರೆಯನ್ನು ಉಳಿಸಿಕೊಡುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ. ಪುರಸಭೆ ಹಾಗೂ ಜಿಲ್ಲಾಡಳಿತ ಸೇರಿ ಕೆರೆಯ ಅಭಿವೃದ್ಧಿ ಹಾಗೂ ಹೂಳು ತೆಗೆಯುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು.
ಬ್ರಿಟೀಷರ ಕಾಲದಿಂದಲೂ ಈ ಕೆರೆಯು ಸಂಪೂರ್ಣವಾಗಿ ನೀರಿನಿಂದ ತುಂಬಿತ್ತು. ನಮ್ಮ ಪೂರ್ವಿಕರು ಜನ-ಜಾನುವಾರುಗಳಿಗಾಗಿ ಕೆರೆ, ಭಾವಿಗಳನ್ನು ತೋಡಿ ಜಲ ಸಂರಕ್ಷಣೆ ಮಾಡುತ್ತಿದ್ದರು. ಇದರಿಂದ ಮಳೆ ನೀರು ಸಂಗ್ರಹವಾಗಿ ಅಂತರಜಲ ಹೆಚ್ಚುತ್ತದೆ. ದನಕರು, ಪಕ್ಷಿಗಳಿಗೆ ಕುಡಿಯುವ ನೀರಿನ ಸೌಕರ್ಯವಾಗುತ್ತದೆ ಆದ್ದರಿಂದ ಕೆರೆಯ ಸುತ್ತ ಬೇಲಿಯನ್ನು ನಿರ್ಮಿಸಬೇಕು, ಗಿಡಮರ ಉದ್ಯಾನ ನಿರ್ಮಿಸಬೇಕು. ಸಾರ್ವಜನಿಕ ಬಳಕೆಗೆ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 