ಗಣತಿ ಕಾರ್ಯಕ್ಕೆ ಮೊದಲು ದಿನವೇ ಕೈಕೊಟ್ಟ ಆ್ಯಪ್ ಸರ್ವರ್ ಸಮಸ್ಯೆ
App server issue that occurred the day before the census
ಹೂವಿನ ಹಡಗಲಿ 23: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೋಮವಾರ ಆರಂಭವಾದ ಮೊದಲ ದಿನವೇ ಸಮೀಕ್ಷೆ ಗೆ ರೂಪಿಸಿದ್ದ ಆ್ಯಪ್ ನ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆ ಎದುರಾಯಿತು. ಸಮೀಕ್ಷೆ 2025 ಗಣತಿ ಕಾರ್ಯ ತಹಸಿಲ್ದಾರ ಜಿ ಸಂತೋಷ್ ಕುಮಾರ್ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದರು.
ಪಟ್ಟಣದ 23 ನೇ ಡಿವಿಜನ್ ಹಳ್ಳದ ರಸ್ತೆಯಲ್ಲಿ ಊಳಿಗದ ಹನುಮೇಶ ಇವರ ಕುಟುಂಬ ಗಣತಿ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು. ಸಮೀಕ್ಷೆಗೆ ನಿಖರವಾದ ಮಾಹಿತಿ ಕುಟುಂಬದವರು ನೀಡಿ ಸಹಕರಿಸಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಧಿಕಾರಿ ರಮೇಶ್ ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೊಟ್ರಗೌಡ ಅಯ್ಯನಗೌಡ್ರ, ಗಣತಿದಾರ ಗುರುಬಸವನಗೌಡ, ಶಿಕ್ಷಕ ಪಕೀರ ಸಾಬ್ ಇದ್ದರು. ಹೂವಿನ ಹಡಗಲಿ ತಾಲೂಕಿನಲ್ಲಿ ಒಟ್ಟು 407 ಗಣತಿ ಬ್ಲಾಕ್ ಗಳಿದ್ದು, 407 ಗಣತಿದಾರರು ಮತ್ತು 35 ಮೇಲ್ವಿಚಾರಕರು 9 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.ಸೆಪ್ಟೆಂಬರ್ 22.9. 25 ರಿಂದ 07.09.25 ರವರೆಗೆ ಗಣತಿ ಕಾರ್ಯ ನಡೆಯುತ್ತದೆ ಎಂದು ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ತಿಳಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 