ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ

ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ  Annual meeting of the Environmental Credit Friendly Cooperative Society

ಗದಗ 17: ನಗರದ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಸಂಸ್ಥೆಯ 10ನೇ ವರ್ಷದ ಸದಸ್ಯರ ವಾರ್ಷಿಕ ಮಹಾಸಭೆ ಜರುಗಿತು. 

ಸಂಸ್ಥೆಯ ಚೇರ್ಮನ್ ಮಂಜುನಾಥ ಚಂದಪ್ಪನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ದಲಿಂಗ ಶ್ರೀಗಳ ಆಶಿರ್ವಾದದಿಂದ 2015 ರಲ್ಲಿ  ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಗೆ ಚಾಲನೆ ಸಿಕ್ಕಿತು. ಆರಂಭದಲ್ಲಿ 480 ಸದಸ್ಯರಿಂದ ಆರಂಭವಾದ ನಮ್ಮ ಸಂಸ್ಥೆ ಇಂದು 1500 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಗ್ರಾಹಕರ ಆತ್ಮವಿಶ್ವಾಸವನ್ನು ಉಳಿಸಿಕೊಂಡಿದೆ. ತಾಲೂಕಿನ ಪ್ರತಿ ಗ್ರಾಮ ಗ್ರಾಮಗಳಲ್ಲಿ ಸದಸ್ಯತ್ವ ಮಾಡುವ ಮೂಲಕ ಸಂಸ್ಥೆ  57 ಲಕ್ಷ ಠೇವಣಿಯಿಂದ ಆರಂಭವಾದ ಸಂಸ್ಥೆ ಇದೀಗ 5 ಕೋಟಿ ಗಡಿ ದಾಟಿದೆ. ಸಂಸ್ಥೆಯು ಕಳೆದ ವರ್ಷ 40 ಕೊಟಿ ವ್ಯವಹಾರ ನಡೆಸಿದೆ. ಸಂಸ್ಥೆಯ ಸಿಬ್ಬಂದಿ ಹಗಲಿರುಳ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ಆರಂಭದಲ್ಲಿ 302500 ಶೇರು ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಈಗ 4,50,200 ಶೇರು ಬಂಡವಾಳದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ 12,24822 ಲಕ್ಷ ರೂ. ಲಾಭಾಂಶ ಗಳಿಸಿದೆ. ಕಳೆದ ವರ್ಷಕ್ಕಿಂತ ಅಧಿಕ 4 ಲಕ್ಷ ರೂ ಅಧಿಕ ಲಾಭ ಗಳಿಸಿದೆ ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷ ಜೀತೇಂದ್ರಕುಮಾರ ಬನ್ಸಾಲಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ವಿಶೇಷವಾಗಿ ಪಿಗ್ಮಿ ಸಂಗ್ರಹಕಾರರನ್ನು ಅಭಿನಂಧಿಸಬೇಕು. ನಮ್ಮ ಸಂಸ್ಥೆ ಗದಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆಯು ಶ್ರಮಿಸುತ್ತಿದೆ. ಹೊಸದಾಗಿ ಶಾಖೆ ತೆರೆಯಲು, ಉನ್ನತಮಟ್ಟದ ಸೇವೆ ನೀಡಲು ಸಂಸ್ಥೆಯು ಉತ್ಸುಕವಾಗಿದೆ. ಕಳೆದ  ಹತ್ತು ವರ್ಷಗಳಲ್ಲಿ ಸಂಸ್ಥೆಯು ನೀರೀಕ್ಷೆ ಮೀರಿ ಬೆಳೆದಿದೆ ಎಂದರು.  

ಕಾರ್ಯಕ್ರಮದಲ್ಲಿ ನಂದಿನಿ ಚಂದಪ್ಪನ್ನವರ, ಸ್ವಿಟಿ ಬನ್ಸಾಲಿ, ಭರತ ಕಂಬಂಮ, ಸಂತೋಷ ಲಕ್ಕುಂಡಿ, ಸುರೇಶ ಎಸ್‌. ಎಚ್‌., ಸವಿತಾ ಎಸ್, ಎಚ್‌.,ಆನಂದ ಮಾನ್ವಿ ಇತರರು ಇದ್ದರು.