ಗಮನ ಸೆಳೆದ ಛದ್ಮವೇಶ

ಗಮನ ಸೆಳೆದ ಛದ್ಮವೇಶ An eye-catching disguise

ವಿಜಯಪುರ 05: ತಾಲ್ಲೂಕಿನ ನಾಗಠಾಣ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ’ನಾಗಠಾಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ’ ದ ಪ್ರಾಥಮಿಕ ಶಾಲಾ ವಿಭಾಗದ ’ಛದ್ಮವೇಶ’ ಸ್ಪರ್ಧೆಯಲ್ಲಿ ಗ್ರಾಮದ ಚಂದ್ರಶೇಖರ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿಯ ಅನುಶ್ರೀ ಚವ್ಹಾಣ ಪ್ರಸ್ತುತ ಪಡಿಸಿದ ’ಸೌದತ್ತಿ ರೇಣುಕಾ ಯಲ್ಲಮ್ಮ’ ಮಾದರಿಯ ’ಛದ್ಮವೇಶ’, ಪ್ರಥಮ ಸ್ಥಾನ ಪಡೆದುಕೊಂಡು ನೋಡುಗರ ಗಮನ ಸೆಳೆದಿದೆ.  

ವಿದ್ಯಾರ್ಥಿನಿಯ ಈ ಸಾಂಸ್ಕೃತಿಕ ವೇಷಭೂಷಣಕ್ಕೆ ಸಂಸ್ಥೆಯ ಅಧ್ಯಕ್ಷರು/ಆಡಳಿತ ಮಂಡಳಿ ಹಾಗೂ ಶಿಕ್ಷಕವರ್ಗ ಅಭಿನಂದನೆ ತಿಳಿಸಿದೆ.