ಅಂಬೇಡ್ಕರ್ ವರ್ತಮಾನದ ಬೆಳಕು: ಡಾ. ಯಲ್ಲಪ್ಪ ಹಿಮ್ಮಡಿ
Ambedkar is the light of the present: Dr. Yallappa Himmadi
ಬೆಳಗಾವಿ 14 : ದೇಶದ ದಲಿತರು, ಮಹಿಳೆಯರು ಮತ್ತು ಸಮಸ್ತ ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಹಕ್ಕು ಪಡೆಯಲು ಬಾಬಾ ಸಾಹೇಬ್ ಅಂಬೇಡ್ಕರ್ ವರ್ತಮಾನದ ಬೆಳಕಾಗಿದ್ದಾರೆ ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.
ನಗರದ ಕೊಲ್ಲಾಪುರ ವೃತ್ತದ ಸಮೀಪವಿರುವ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಛೇರಿಯ ಸಭಾಂಗಣದಲ್ಲಿ, ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಏರಿ್ಡಸಿದ್ದ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಅಂಬೇಡ್ಕರ್ ಅವರಿಗೆ ತಮ್ಮ ಹೋರಾಟದಲ್ಲಿ ಅಚಲ ವಿಶ್ವಾಸವಿತ್ತು, ದಲಿತರ ಸಮಸ್ಯೆಗಳು ಹಿಮಾಲಯದಂತಿವೆ. ಈ ಹಿಮಾಲಯವನ್ನು ಎದುರು ಹಾಕಿಕೊಂಡು ನಾನು ನನ್ನ ತಲೆ ಒಡೆದುಕೊಂಡರೂ ಚಿಂತೆಯಿಲ್ಲ, ಹಿಮಾಲಯ ಅಲುಗಾಡದಿದ್ದರೂ ನನ್ನ ಒಡೆದ ತಲೆ ನೋಡಿ ಏಳು ಕೋಟಿ ದಲಿತರು ಆ ಹಿಮಾಲಯವನ್ನು ನೆಲಸಮ ಮಾಡಿಯಾರು ಮತ್ತು ತಮ್ಮ ಪ್ರಾಣವನ್ನೂ ಅರ್ಿಸಿಯಾರು ಎಂದು ಗಟ್ಟಿಯಾಗಿ ನಂಬಿಕೊಂಡಿದ್ದರು ಮತ್ತು ಬದುಕಿನುದ್ದ ಹೋರಾಡಿದರು ಎಂದು ಹಿಮ್ಮಡಿ ಹೇಳಿದರು
ರವಿ ಕಾಂಬಳೆ, ಸನ್ನಿ ಬಾನ್ಸ್ , ಸಂತೋಷ್ ಪಾಟೀಲ್, ಬಸವರಾಜ ಕೋಲ್ಕಾರ್, ಶುಭಂ ಮದಾಳೆ ಇತರರು ಉಪಸ್ಥಿತರಿದ್ದರು. ಪ್ರಕಾಶ ಬೊಮ್ಮನ್ನವರ ಸ್ವಾಗತಿಸಿದರು. ಅಂಕುಶ್ ಪಾಟೀಲ್ ವಂದಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 