ಚಿಕ್ಕಮ್ಯಾಗೇರಿ ಗ್ರಾಮಕ್ಕೆ ಸ್ವಾಗತ ಕಮಾನು ನಿರ್ಮಾಣಕ್ಕೆ ಅಮರಗಟ್ಟಿ ಚಾಲನೆ
Amaragatti launches construction of welcome arch for Chikkamyageri village
ಯಲಬುರ್ಗಾ 22: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸ್ವಾಗತ ಕಮಾನು ನಿರ್ಮಾಣ ಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಮಾತನಾಡಿ,
ಗ್ರಾಮದ ಹಿರಿಯರ ಸಲಹೆಯಂತೆ ಹಾಗೂ ಸದಸ್ಯರ ಸಹಕಾರದಿಂದ ಗ್ರಾಮದ ಬಸ್ ನಿಲ್ದಾಣ ದ ಹತ್ತಿರ ಸ್ವಾಗತ ಕಮಾನನ್ನು 1.40. ಲಕ್ಷದಲ್ಲಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಗ್ರಾಮದ ಹಿರಿಯರ ಬೇಡಿಕೆಯಂತೆ ಎರಡು ಕಡೆ ಹೈ ಮಾಸ್ಕ್ ಬೀದಿ ದೀಪ ಅಳವಡಿಸಲಾಗಿದೆ. ಎಲ್ಲಾ ಸದಸ್ಯರ ಸಹಕಾರದಿಂದ ಗ್ರಾಮ ಅಭಿವೃದ್ಧಿಯತ್ತ ಸಾಗುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಈ ವೇಳೆ ಅರ್ಚಕರಾದ ಶರಣಯ್ಯ ಶಾಸ್ತ್ರಿಮಠ, ನಿವೃತ್ತ ಶಿಕ್ಷಕ ಸಕ್ರ್ಪ ಕುಂಟ್ರು, ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಈರ್ಪ ಸಂಗನಾಳ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಸೂಡಿ, ಮಾಜಿ ಸದಸ್ಯ ಹನುಮಪ್ಪ ಬಾವಿಕಟ್ಟಿ, ಮುಖಂಡರಾದ ಶರಣಪ್ಪ ಮೆಣಸಿಗೇರಿ, ರಾಮಣ್ಣ ಹಿರೇಮನಿ, ಹನುಮಂತರಾಯ ದೇಸಾಯಿ, ಶರಣಪ್ಪ ಚವಡಿ, ಶಾಂತಪ್ಪ ಅಂಗಡಿ, ಬಾಗೇಶ ಬಿಂದ್ಗಿ, ಮಾರುತೆಪ್ಪ ರ್ಯಾವಣಕಿ, ಸುಭಾಷ ವದ್ನಾಳ, ಬಾಳಪ್ಪ ಚವಡಿ, ಷಣ್ಮುಖಪ್ಪ ಆರೇರ, ಬಾಲಪ್ಪ ಕುಂಟ್ರು, ಹಾಲಪ್ಪ ಚವಡಿ, ಶರಣಪ್ಪ ರ್ಯಾವಣಕಿ, ಸಿದ್ದಲಿಂಗಪ್ಪ ಕುಕನಪಳ್ಳಿ ಸೇರಿ ಗ್ರಾಮದ ಗುರು ಹಿರಿಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 