ಅಕ್ಕಮಹಾದೇವಿ ಜಯಂತಿ ಉದ್ಘಾಟನೆ : ಸ್ಮರಣ ಸಂಚಿಕೆ ಬಿಡುಗಡೆ
ಕೊಪ್ಪಳ 12: ಶನಿವಾರ ನಗರದ ಕೋಟೆ ರಸ್ತೆಯಲ್ಲಿರುವ ಮಹೇಶ್ವರ ಮಂದಿರದ ಸಭಾಂಗಣದಲ್ಲಿ ಅಕ್ಕಮಹಾದೇವಿ ಮಂಡಳ ಏರಿ್ಡಸಿದ ಅಕ್ಕಮಹಾದೇವಿ ಯವರ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಕೆ ರಾಜಶೇಖರ್ ಹಿಟ್ನಾಳ ಪಾಲ್ಗೊಂಡು ಮಾತನಾಡಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಸಮಾಜಸೇವಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು, ದಕ್ಷಿಣ ಕನ್ನಡ ಮಂಗಳೂರಿನ ಕುಡ್ಲ ತುಳು ಚಾನಲ್ ವಾರ್ತಾವಾಚಕಿ ಡಾ, ಪ್ರಿಯಾ ಹರೀಶ್ ಮಾತನಾಡಿ ವ್ಯಕ್ತಿ ಮತ್ತು ಜೀವ ಶಾಶ್ವತವಲ್ಲ ವ್ಯಕ್ತಿತ್ವ ಹಾಗೂ ವಿಚಾರ ಶಾಶ್ವತವಾಗಿದೆ ಎಂದರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಮಂಗಳೂರಿನ ಕೃಷಿ ಕ್ಷೇತ್ರದ ಸಾಧಕ ಶಿಕ್ಷಣ ಇಲಾಖೆಯ ಡಾ, ಕೃಷ್ಣಪ್ಪಗೌಡ ಪಡ್ಡಂ ಬೈಲ್ ರವರು ಮಾತನಾಡಿ ಸಾಮಾಜಿಕ ಸಾಹಿತಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಅಪಾರ ಕ್ಷೇತ್ರವಾಗಿದೆ ಇದರಲ್ಲಿ ನಡೆ ದಷ್ಟು ದಾರಿ, ಪಡೆದಷ್ಟು ಭಾಗ್ಯ ಸಿಗಲಿದೆ ಎಂದ ಅವರು ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಬೇಕು ಎಂದರು.
ಇದೆ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು, ಸಂಚಿಕೆ ಕುರಿತು ಕೊಪ್ಪಳದ ಹಿರಿಯ ಸಾಹಿತಿ ಗಳಾದ ಎಸ್ ಎಂ ಕಂಬಾಳಿಮಠ ಮತ್ತು ಮಹೇಶ್ ಮನ್ನಾಪುರ ರವರು ಮಾತನಾಡಿದರು, ಅಲ್ಲದೆ ನವ ಪ್ರಗತಿ ಮಹಿಳಾ ಮಂಡಳದ ಉಪಾಧ್ಯಕ್ಷರಾದ ಚಂದಾ ಅಗಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಹಿಳೆಯರ ಮತ್ತು ಮಹಿಳಾ ಸಂಘಟನೆಗಳ ಜವಾಬ್ದಾರಿ ಕುರಿತು ಮಾತನಾಡಿದರು, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಲದ ಅಧ್ಯಕ್ಷರಾದ ಕೋಮಲಾ ಕುದುರೆಮೋತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವ ಸದಸ್ಯರ ಸಹಕಾರದಿಂದ ಕಳೆದ 25 ವರ್ಷಗಳಿಂದ ಮಹಿಳಾ ಮಂಡಳದಿಂದ ಉತ್ತಮ ಸಮಾಜ ಸೇವಾ ಕಾರ್ಯ ನಡೀತಾ ಇದೆ ಇದಕ್ಕೆ ಕಳೆದ ಸಾಲಿನಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ಕೂಡ ಲಭಿಸಿರುವುದು ಮಹಿಳಾ ಮಂಡಳಕ್ಕೆ ಹೆಮ್ಮೆಯ ವಿಷಯವಾಗಿದೆ ,ತಮಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅವರು ಅಭಿನಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಸದ ಕೆ ರಾಜಶೇಖರ್ ಹಿಟಾಳ್ ರವರು ಭೇಟಿ ಮಾಡಿ ಅಕ್ಕಮಹಾದೇವಿ ಮಹಿಳಾ ಮಂಡಳಕ್ಕೆ ಶುಭ ಕೋರಿ ತೆರಳಿದರು, ಅವರಿಗೆ ಕಾರ್ಯಕ್ರಮದ ಪರವಾಗಿ ಸನ್ಮಾನಿಸಲಾಯಿತು, ವೇದಿಕೆ ಮೇಲೆ ಶಿಕ್ಷಕ ಮತ್ತು ಸಾಹಿತಿ ಶ್ರೀನಿವಾಸ್ ಚಿತ್ರಗಾರ ಪತ್ರಕರ್ತ ಎಂ ಸಾಧಿಕ ಅಲಿ ಅಲ್ಲದೆ ನಗರಸಭೆಯ ಸದಸ್ಯರಾದ ಅಜೀಮ್ ಅತ್ತಾರ್ ಕಾಂಗ್ರೆಸ್ ನಾಯಕರಾದ ಶಿವು ಪೌಲಿ ಶೆಟ್ಟರ್ ಉಪಸ್ಥಿತರಿದ್ದು ಅನ್ನಪೂರ್ಣಮ್ಮ ಮನ್ನಪೂರ್, ವಿಜಯಲಕ್ಷ್ಮಿ ಮುದ್ಗಲ್ ರವರು ಆರಂಭದಲ್ಲಿ ಪ್ರಾರ್ಥನೆ ಗೀತೆ ಹಾಡಿದರೆ, ಜ್ಯೋತಿ ವಡ್ಡಟ್ಟಿ ಅವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಗೀತಾ ಇಟಗಿ ಮತ್ತು ಲಲಿತಾ ಗುತ್ತಿ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರೆ ಪೂರ್ಣಿಮಾ ಶೆಟ್ಟರ್ ಅವರು ಕೊನೆಯಲ್ಲಿ ವಂದಿಸಿದರು.