ಕೊಪ್ಪಳ 14: ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು ಗುರುವಾರದಂದು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರು ಮಹಾ ನಗರ ಪಾಲಿಕೆಯ ಕಾರ್ೊರೇಟರ್ ಸಮೀ ಅಜ್ಜು ಅವರ ಕೋರಿಕೆ ಮೇರೆಗೆ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿದ ವೇಳೆ ಅವರಿಗೆ ಅಜ್ಜು ಬ್ರದರ್ಸ್ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಅವರನ್ನು ಬರಮಾಡಿಕೊಂಡು ಸನ್ಮಾನಿಸಲಾಯಿತು.
ನಂತರ ಅವರ ನಿವಾಸದಲ್ಲಿಯೇ ಸ್ವಲ್ಪ ಸಮಯಗಳ ಕಾಲ ಚರ್ಚೆ ಮಾಡಿ ಈಗಿನ ಸಂದರ್ಭದಲ್ಲಿ ಮುಸ್ಲಿಂ ಸಮಾಜ ಅನುಭವಿಸುತ್ತಿರುವ ಕೆಲವೊಂದು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆ ಹೇಗೆ ಸಾಧ್ಯವಾಗಬಹುದು ಎಂಬುವುದರ ಬಗ್ಗೆ ಚರ್ಚಿಸಲಾಯಿತು. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಮಾಜದ ಪ್ರಮುಖರೆಲ್ಲರೂ ಒಂದೇ ವೇದಿಕೆಯಲ್ಲಿ ಕೆಲಸ ಮಾಡುವಂತಹ ಪ್ರಾಮಾಣಿಕ ಪ್ರಯತ್ನ ನಮ್ಮ ಸಮಾಜದ ಎಲ್ಲಾ ಜನಪ್ರತಿನಿಧಿಗಳಿಂದ ನಡೆಯಲಿ ಅದಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಕಾರ್ೊರೇಟರ್ ಸಮೀ ಅಜ್ಜು ಅಲ್ಲದೆ ಸಮಾಜದ ಮುಖಂಡ ರಿಜ್ವಾನ್ ಅಜ್ಜು ಸೇರಿದಂತೆ ಕೊಪ್ಪಳದ ಯುವ ನಾಯಕರಾದ ಸುಹೇಲ್ ಪಟೇಲ್ ಹರ್ಷದ್ ಪಟೇಲ್, ಆರಿಫ್ ಪಟೇಲ್ ಮುನೀರ್ ಶೇಕ್ ಮತ್ತು ಶ್ರೀರಂಗಪಟ್ಟಣ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ನಾಯಕರಾದ ಇರ್ಫಾನ್ ಜಾಗೀರ್ದಾರ್ ಸೇರಿದಂತೆ ಅಜ್ಜು ಬ್ರದರ್ಸ್ ನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.