ಮೂರು ಬಂಗಾರದ ಪದಕ ಪಡೆದ ಅಜಿತ್ ಮಾಗಡಿ

ಮೂರು ಬಂಗಾರದ ಪದಕ ಪಡೆದ ಅಜಿತ್ ಮಾಗಡಿ Ajit Magadi wins three gold medals

ಪಾಲಬಾವಿ 21 :  ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಡಾ:ಬಿ.ಆರ್‌.ಅಂಬೇಡ್ಕರ್ ಅಧ್ಯಯನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಯಬಾಗ ತಾಲೂಕು ನಿಪನಾಳ ಗ್ರಾಮದ ಅಜಿತ್ ಮ್ಯಾಗಡಿ ಅವರು ಮೂರು ಗೋಲ್ಡ್‌ ಮೆಡಲ್ ಗಳನ್ನು ಪಡೆದುಕೊಂಡಿದ್ದಾರೆ. ಡಾ:ಬಿ.ಆರ್‌.ಅಂಬೇಡ್ಕರ್ ಸ್ಟಡೀಸ್ ಸಂಯೋಜಕರಾದ ಸುಭಾಷಚಂದ್ರ ನಾಟೇಕರ್ ಮಾರ್ಗದರ್ಶನ ನೀಡಿರುತ್ತಾರೆ. ಗುರುವಾರ ದಿ.23ರಂದು ಜರಗುವ ಧಾರವಾಡ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಕೋತ್ಸವದಲ್ಲಿ ಮಾನ್ಯ ರಾಜ್ಯಪಾಲರಾದ ಥಾಮಸ್ ಚಂದ್ರ ಗೇಹಲೋಟ್ ಅವರಿಂದ ಗೋಲ್ಡ್‌ ಮಾಡೆಲ್ ಪಡೆಯಲಿದ್ದಾರೆ ಎಂದು ಕುಲ ಸಚಿವ ಎ.ಎಂ.ಖಾನ್ ತಿಳಿಸಿದ್ದಾರೆ.

ಅಜೀತ ಮ್ಯಾಗಡಿಯವರು ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ, ಸಾಮಾಜಿಕ ನ್ಯಾಯದ ಹೋರಾಟಗಾರ ಡಾ:ಬಿ.ಆರ್‌.ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ  ದಾರೀದೀಪವಾಗಿವೆ. ಸಮಾನತೆ, ಶಿಕ್ಷಣ ಮತ್ತು ಸ್ವಾಭಿಮಾನ ಕುರಿತ ಸಂದೇಶಗಳು ನಮ್ಮ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿವೆ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಆಳವಾದ ಅಧ್ಯಯನ ಮಾಡಿ ಮೂರು ಗೋಲ್ಡ್‌ ಮೆಡಲ್ ಪಡೆಯುತ್ತಿರುವುದು ಅಜೀತ ಮ್ಯಾಗಡಿಗೆ ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ: ವೈ.ಬಿ.ಹಿಮ್ಮಡಿ, ಲಿಂಗಸೂಗೂರು  ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಶಂಕರ ಕೊಡತೆ, ಎಸ್ಸಿಎಸ್ಟಿ ನೌಕರರ ಸಂಘ ರಾಜ್ಯ ಸಂಚಾಲಕ ಸುಂದರ ಮ್ಯಾಗಡಿ ಸೇರಿದಂತೆ ಗುರು-ಹಿರಿಯರು ಅಭಿನಂಡಿಸಿದ್ದಾರೆ.