ಮಳೆಯಿಂದ ಹಾನಿ ಪ್ರದೇಶಕ್ಕೆ ಕೃಷಿ ಅಧಿಕಾರಿ ಭೇಟಿ

ಮಳೆಯಿಂದ ಹಾನಿ ಪ್ರದೇಶಕ್ಕೆ ಕೃಷಿ ಅಧಿಕಾರಿ ಭೇಟಿ Agriculture officer visits rain-damaged area

ಮಳೆಯಿಂದ ಹಾನಿ ಪ್ರದೇಶಕ್ಕೆ ಕೃಷಿ ಅಧಿಕಾರಿ ಭೇಟಿ 

ಆಲಮೇಲ 10: ಸಮೀಪ ಕಡಣಿ ಭೀಮಾ ನದಿ ತೀರದ ಗ್ರಾಮಗಳಿಗೆ ಕೃಷಿ ಅಧಿಕಾರಿ ಅನಿಲದೇವ ದಶವಂತ ಭೇಟಿ ನೀಡಿ ಬೆಳೆ ಹಾನಿ ಪ್ರದೇಶವನ್ನು ವೀಕ್ಷಿಸಿದರು. ಕಡಣಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದ ಮತ್ತು ಭೀಮ ನದಿಯಿಂದ ಪ್ರವಾಹದಿಂದ ಹಾನಿಗೊಳಗಾದ, ತೊಗರಿ, ಹತ್ತಿ, ಹೆಸರು, ಉದ್ದ, ಮುಂತಾದ ಬೆಳೆಗಳನ್ನು ವೀಕ್ಷಣೆ ಮಾಡಿದರು.  

ಹಾನಿಗೊಳಗಾದ ಪ್ರತಿ ಜಮೀನುಗಳಿಗೆ ಭೇಟಿ ನೀಡುತ್ತೇನೆ. ಈ ಭಾಗದಲ್ಲಿ ಆಗಿರುವ ಹಾನಿಯ ಪರಿಣಾಮವನ್ನು ಅರ್ಥೈಸಿಕೊಂಡು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಗ್ರಾಮ ಲೆಕ್ಕಾಧಿಕಾರಿಯಾದ ಗೊಂದಳಿ, ರೈತರ ಸೈಯದ್ ವಾಡೆದ್ ಅನೇಕ ರೈತರ ಸಮ್ಮುಖದಲ್ಲಿ ಭೇಟಿ ನೀಡುತ್ತೇನೆ ಎಂದು ಲೋಕದರ್ಶನ ಪತ್ರಿಕೆಗೆ ತಿಳಿಸಿದರು.