ಕೃಷಿ ಇಲಾಖೆಯಿಂದ ರೈತರಿಗೆ ಬೀಜ, ಗೊಬ್ಬರ ವಿತರಣೆ

 ಕೃಷಿ ಇಲಾಖೆಯಿಂದ ರೈತರಿಗೆ ಬೀಜ, ಗೊಬ್ಬರ ವಿತರಣೆ  Agriculture Department distributes seeds and fertilizers to farmers

ಲೋಕದರ್ಶನ ವರದಿ 

ಗದಗ 25:  ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯಿಂದ ಮುಂಗಾರು  ಬಿತ್ತನೆಗಾಗಿ  ಬೀಜ, ಗೊಬ್ಬರವನ್ನು  ವಿತರಣೆ ಕಾರ್ಯಕ್ರಮವನ್ನು ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ರಾಮಣ್ಣ ಹೂವಣ್ಣವರ ಉದ್ಘಾಟಿಸಿದರು.   ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವನವರ, ಕೃಷಿ ಅಧಿಕಾರಿ ರಾಜೇಶ್ವರಿ ಸಜ್ಜನ, ರೈತ ಮುಖಂಡರಾದ ಆರ್‌.ಆರ್‌. ಕಾಶಪ್ಪನವರ, ಹುಚ್ಚಣ್ಣ ಶ್ಯಾಪೂರ, ಗದಗ ತಾಲ್ಲೂಕಾಧ್ಯಕ್ಷ ಯಲ್ಲಪ್ಪ ಬಾಬರಿ, ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.