ಅಧಿಕ ಮಾಸದ ಬಾಗಿನ : ಆಸಕ್ತ ದಂಪತಿಗಳಿಗೆ ಪ್ರಸಾದ
Adhika month: Prasad for interested couples
ಲೋಕದರ್ಶನ ವರದಿ
ಕೊಪ್ಪಳ 02: ಇಲ್ಲಿನ ಗವಿಶ್ರೀ ನಗರದಲ್ಲಿರುವ ಪ್ರಖ್ಯಾತ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ವತಿಯಿಂದ ಅಧಿಕ ಮಾಸದ ಪ್ರಯುಕ್ತ ಬಾಗಿನ ಕೊಡುವ ಪದ್ಧತಿಯಂತೆ 33 ದಂಪತಿಗಳಿಗೆ ಶ್ರೀ ಸಹಸ್ರಾಂಜನೇಯ ಗುರುವಿನ ಪ್ರೇರಣೆಯಿಂದ ಈ ಅಧಿಕ ಮಾಸದ ಕೊನೆಯ ಶನಿವಾರ ಜೂನ್ 13 ರಂದು ಬೆಳಿಗ್ಗೆ 9 ಗಂಟೆಗೆ ಜರುಗುವ ವಿಶೇಷ ಪೂಜೆಯಲ್ಲಿ ಬಾಗಿನ ಕೊಡಲಾಗುವದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ತಮ್ಮ ಮನೆಯಲ್ಲಿ ಶ್ರೀ ಆಂಜನೇಯ ಪ್ರತಿಮೆಯನ್ನು ಪೂಜಿಸಲು ಇಚ್ಚಿಸುವಂಥ 33 ದಂಪತಿಗಳಿಗೆ ಆಮಂತ್ರಣ ಬಾಗಿನ ಕೊಡುವ ಪದ್ಧತಿಯಂತೆ ಈ ಬಾರಿ ಅಜ್ಜನ ಸನ್ನಿಧಿಯಿಂದ ಪ್ರತಿಮೆಯನ್ನು ಪೂಜಿಸಲು ಅವರಿಗೆ ಆಶೀರ್ವಾದ ರೂಪದಲ್ಲಿ ಉಡುಗೊರೆಯಾಗಿ ಕೊಟ್ಟು ಹಾರೈಸಲಾಗುವದು. ಸದರಿ ಆಸಕ್ತ ದಂಪತಿಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಇಲ್ಲವೇ ಖುದ್ದಾಗಿ ಭೇಟಿಯಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ಕಡ್ಡಾಯವಾಗಿ ಅಂದು ಅವರು ಆಗಮಿಸಬೇಕು ಹಾಗೂ ಹನುಮನ ವಿಗ್ರಹ ಪೂಜೆ ಮಾಡುವ ಕುಟುಂಬಗಳು ಮಾತ್ರ ಹೆಸರು ನೊಂದಾಯಿಸಿಕೊಳ್ಳಬೇಕು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 