ಕಾದಂಬರಿಕಾರ ಭೈರ​‍್ಪರಿಗೆ ನುಡಿನಮನ

 ಕಾದಂಬರಿಕಾರ ಭೈರ​‍್ಪರಿಗೆ ನುಡಿನಮನ A word to the novelist Bhairava

ಲೋಕದರ್ಶನ ವರದಿ 

ಕಾದಂಬರಿಕಾರ ಭೈರ​‍್ಪರಿಗೆ ನುಡಿನಮನ  

ಬೆಳಗಾವಿ 11: ನಗರದ ಅಕಾಡಮಿ ಆಫ್ ಕಂಪರೇಟಿವ್ ಫಿಲಾಸಫಿ ಆ್ಯಂಡ ರಿಲಿಜನ್ ಸಂಘಟನೆಯವರು ಇದೇ ದಿ. 13 ಸೋಮವಾರದಂದು ಸಾಯಂಕಾಲ 5-30 ಕ್ಕೆ ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಎ.ಸಿ.ಪಿ.ಆರ್‌. ಸಭಾಭವನದಲ್ಲಿ “ಖ್ಯಾತ ಕಾದಂಬರಿಕಾರ ದಿ. ಡಾ. ಎಸ್‌. ಎಲ್‌. ಭೈರ​‍್ಪ- ನುಡಿನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡದ್ದಾರೆ.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ಲೇಖಕರಾದ ಸರಜು ಕಾಟ್ಕರ್ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಮತ್ತು , ಕರ್ನಾಟಕ ಉತ್ತರ ಪ್ರಾಂತದ ಆರ್‌.ಎಸ್‌.ಎಸ್‌. ಪ್ರಾಂತ ನಿರ್ವಾಹಕರಾದ ರಾಘವೇಂದ್ರಜಿ ಕಾಗವಾಡ ಅವರು ಆಗಮಿಸಲಿದ್ದು ನಿವೃತ್ತ ಉಪನ್ಯಾಸಕರಾದ ಡಾ. ರಾಮಕೃಷ್ಣ ಮರಾಠ ಮತ್ತು ಲೇಖಕ ಗುಂಡೇನಟ್ಟಿ ಮಧುಕರ ನುಡಿನಮನ ಸಲ್ಲಿಸಲಿದ್ದಾರೆ.  

ಸಾಹಿತ್ಯಾಸಕ್ತರು, ಭೈರ​‍್ಪ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗೌರವ ಕಾರ್ಯದರ್ಶಿ ಮಾರುತಿ ಝಿರಲಿ ಮತ್ತು ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.