ಲೋಕದರ್ಶನವರದಿ
ಹಾವೇರಿ೧೧: ಮಾರಕ ಕೊರೊನಾ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಾಧ್ಯಂತ ಸಮರ ಸಾರಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಸುದೀರ್ಘವಾದ ಹೋರಾಟ ರಾಜ್ಯ ಸಕರ್ಾರ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ಪಟ್ಟಣದ ಸ್ವಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ಸೋಂಕಿತರ ಸಂಖ್ಯೆಗಳಲ್ಲಿ ನಾವು ಕಡಿಮೆಇದ್ದೇವೆ. ಪಕ್ಕದ ಮಹಾರಾಷ್ಟ್ರದಲ್ಲಿ 20ಸಾವಿರಕ್ಕೂ ಅಧಿಕ ಸೋಂಕು ಪತ್ತೆಯಾಗಿದೆ. ಅದೇ ರೀತಿ ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ ನಮಗಿಂತ ಹೆಚ್ಚು ಸಂಖ್ಯೆ ಮತ್ತು ಸಾವುಗಳು ಕೂಡಾ ಹೆಚ್ಚಾಗಿವೆ. ಕೇರಳದ ನಂತರ ಅತಿ ನಿಯಂತ್ರಣ ಮಾಡಲು ಯಶಸ್ವಿಯಾಗಿದ್ದು ಕನರ್ಾಟಕ ನಮ್ಮ ಮುಖ್ಯಮಂತ್ರಿಗಳು ಹಲವಾರು ಕ್ರಮಗಳನ್ನು ಕೈಗೊಂಡು ಲಾಕ್ಡೌನ್ಗೂ ಒಂದು ವಾರ ಮುಂಚೆ ಎಲ್ಲ ಸಾರ್ವಜನಿಕ ಮಾಲ್, ಚಿತ್ರಮಂದಿರ, ಮಾರುಕಟ್ಟೆಗಳನ್ನು ಬಂದ್ ಮಾಡಿದ್ದರು.
ಲಾಕ್ಡೌನ್ ಮೂರು ನಮಗೆ ಹಲವಾರು ಸವಾಲುಗಳನ್ನು ಒಡ್ಡಿದೆ. ಮೊದಲನೆಯದಾಗಿ ಈ ಸಂದರ್ಭದಲ್ಲಿ ಪರಸ್ಪರ ಅಂತರ ಮತ್ತು ಮಾಸ್ಕ್ ಧರಿಸುವ ಕೆಲಸ ಕಾರ್ಯ ಸಾರ್ವಜನಿಕರ ಸಹಕಾರದಿಂದ ಮಾತ್ರ ಸಾಧ್ಯ.ಎರಡನೇದಾಗಿ ಬೇರೆದೇಶ ಮತ್ತು ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಕಟ್ಟು ನಿಟ್ಟಿನಕ್ರಮ ಕೈಗೊಳ್ಳಬೇಕಾಗಿದೆ.
ಇತ್ತೀಚೆಗೆ ಅಜ್ಮೀರ ಹೋದ ಸುಮಾರು 38 ಜನರು ಬೆಳಗಾಂವಿ ಪಟ್ಟಣದಕ್ಕೆ ಆಗಮಿಸಿದ್ದರು. ಅವರನ್ನು ಗುತರ್ಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ 30 ಜನರಿಗೆ ಪಾಸಿಟಿವ್ ಬಂದಿದೆ.ಅದೇರೀತಿ ಕಲಬುರಗಿ ಮತ್ತು ವಿಜಯಪುರದಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಗಡಿಗಳಲ್ಲಿ ಕಟ್ಟನಿಟ್ಟಿನ ಪರೀಕ್ಷೆಗೆ ಒಳಪಡಿಸುವ ಸವಾಲು ಇದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ತಾಲೂಕಾ ಯುವ ಮೋಚರ್ಾ ಅಧ್ಯಕ್ಷ ರೇಣುಕನಗೌಡ ಪಾಟೀಲ ಸೇರಿದಂತೆ ಮುಖಂಡರು ಇದ್ದರು.