ತರಾಸು ಅವರದ್ದು ಕಣ್ಣಿಗೆ ಕಟ್ಟುವಂಥ ಭಾಷೆ: ಶೀರೀಷ ಜೋಶಿ
A lecture on “Durghastamana” – a impression program
ಬೆಳಗಾವಿ 28: ಖ್ಯಾತ ಲೇಖಕ ತರಾಸು ಅವರು ಬರೆದ ಕಾದಂಬರಿ ‘ದುರ್ಗಾಸ್ತಮಾನ’ ದಲ್ಲಿ ಬಳಿಸಿದ ಭಾಷೆ ತುಂಬ ಅಪ್ಯಾಯಮಾನವಾದುದು. ಸಂಪೂರ್ಣ ಚಿತ್ರದುರ್ಗ, ಚಿತ್ರದುರ್ಗದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತರಾಸು ಅವರು ಬರೆದಿದ್ದಾರೆ. ತರಾಸು ಅವರು ಬಳಿಸಿದಂಥ ಬಾಷೆ. ಕನ್ನಡವನ್ನು ಎಷ್ಟು ಸುಂದರವಾಗಿ, ಸಮರ್ಥ ವಾಗಿ ಬಳಿಸಿಕೊಳ್ಳಬಹುದು ಎಂಬುದಕ್ಕೊಂದು ಇವರ ಬರೆವಣಿಗೆ ಮಾದರಿಯಾಗಿದೆ. ಕಣ್ಣಿಗೆ ಕಟ್ಟವಂತಹ ಭಾಷೆ ತರಾಸು ಅವರದ್ದು ಎಂದು ಹಿರಿಯ ಲೇಖಕ ನಾಟಕಕಾರ ಶೀರೀಷ ಜೋಶಿಯವರು ಇಂದಿಲ್ಲಿ ಹೇಳಿದರು.
ನಗರದ ರಂಗಸಂಪದ ಬೆಳಗಾವಿ ತಂಡದ ಸ.ಮಾ.ಸ. ದವರು ಇದೇ ದಿ.26 ರಂದು ರವಿ ಹಿರೇಮಠ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಕಾದಂಬರಿಕಾರ ತರಾಸು ಅವರ ಐತಿಹಾಸಿಕ ಕಾದಂಬರಿ "ದುರ್ಗಾಸ್ಥಮಾನ" ಕುರಿತ ಉಪನ್ಯಾಸ -ಅನಿಸಿಕೆ ಕಾರ್ಯಕ್ರಮ ಪ್ರಮುಖ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ತಪ್ಪು ಗ್ರಹಿಕೆಗಳನ್ನ ತೊಡೆದು ಹಾಕಿ ಐತಿಹಾಸಿಕವಾಗಿ ಸಾಕ್ಷಾಧಾರಗಳಿಂದ ವಸ್ತುಸ್ಥಿತಿಗಳನ್ನು ಓದುಗರೆದುರು ತೆರೆದಿಡುವುದೇ ಒಬ್ಬ ಬರೆಹಗಾರನ ಆದ್ಯ ಕರ್ತವ್ಯ. ಈ ಕಾದಂಬರಿ ಐತಿಹಾಸಿಕ ಕಾದಂಬರಿ ಬರೆಯುವವರಿಗೊಂದು ಮಾದರಿಯಾಗಿದೆ ಎಂದು ಜೋಶಿ ಅವರು ಹೇಳಿದರು.
ಡಾ.ಭವ್ಯಾ ಸಂಪಗಾರ, ಮಮತಾ ಶಂಕರ, ಮನೋಜ ಚರಂತಿಮಠ, ಪ್ರೊ. ಅಶೋಕ ಬೈಲವಾಡ ಮತ್ತು ಸೀಮಾ ಕುಲಕರ್ಣಿ ದುರ್ಗಾಸ್ತಮಾನ ಕೃತಿಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಮಾಸ ಸಂಸ್ಥೆ ಸಂಚಾಲಕರಾದ ಡಾ. ಅರವಿಂದ ಕುಲಕರ್ಣಿ ಸ್ವಾಗತಿಸಿದರು. ಪದ್ಮಾ ಕುಲಕರ್ಣಿ ಸಮಾರೋಪ ನುಡಿಗಳನ್ನಾಡಿದರು. ರವಿ ಹಿರೇಮಠ ಸ್ವಾಗತಿಸಿದರು. ವೀಣಾ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಸಾದ ಕಾರಜೋಳ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 