ಫೇ. 17 ರಂದು ಬೀದಿ ಬದಿಯ ವ್ಯಾಪಾರಿಗಳ ಬೃಹತ್ ಸಮಾವೇಶ
A huge gathering of street vendors
ಲೋಕದರ್ಶನ ವರದಿ
ಜಮಖಂಡಿ 15: ನಗರದಲ್ಲಿನ ಬೀದಿ ಬದಿಯ ವ್ಯಾಪಾರಿಗಳ ಸಂಘಟನೆಯಿಂದ ಬೃಹತ್ ಸಮಾವೇಶ ಫೇ. 18 ರಂದು ಮುಂಜಾನೆ 11 ಗಂಟೆಗೆ ಬಸವ ಭವನದಲ್ಲಿ ಜರುಗಿಲಿದೆ ಎಂದು ರಾಜ್ಯ ಸಂಚಾಲಕ ಡಾ. ಶಶಾಂಕ ವಳವಾಡೆ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೇ. 17 ರಂದು ಬೃಹತ್ ಬೈಕ್ ರಾ್ಯಲಿ ಟೀಪು ಸುಲ್ತಾನ್ ಸರ್ಕಲದಿಂದ ಮಾರ್ಕೆಟ್ ಮಾರ್ಗವಾಗಿ ಎ.ಜಿ. ದೇಸಾಯಿ ಸರ್ಕಲ್ದಿಂದ ಬಸವ ಭವನ ತಲುಪುವುದು ಫೇ. 18 ರಂದು ಮುಂಜಾನೆ 11 ಗಂಟೆಗೆ ಬೀದಿ ಬದಿಯ ವ್ಯಾಪಾರಿಗಳ ಬೃಹತ್ ಸಮಾವೇಶ ಜರುಗತ್ತದೆ. ಸಂಸ್ಥಾಪಕರಾದ ಅರವಿಂದಸಿಂಗ್ ಜಿ, ರಾಜ್ಯಾಧ್ಯಕ್ಷರಾದ ಡಾ, ಸಿ.ಇ.ರಂಗಸ್ವಾಮಿಯವರು, ಕಾವ್ಯಾಶ್ರೀ ಕೆ.ಎಸ್. ಅನಿಸಾ ಫಾತಿಮಾ ಶೇಖ ಸಲ್ಮಾ, ಗುರು ಸಾವಂತ ಆಗಮಿಸಲಿದ್ದು. ರಾಜಕಾರಣಿಗಳು ಹಾಗೂ ರಾಜಕೀಯ ಧುರೀಣರು ಸಹ ಆಗಮಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ನಬೀಸಾಬ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನಪ್ಪ ಘಾಟಗೆ, ಜಿಲ್ಲಾ ಸಹ ಕಾರ್ಯದರ್ಶಿ ಯಲ್ಲಪ್ಪ ಬಜಂತ್ರಿ, ಅಸ್ಲಂ ಗಲಗಲಿ, ಮೈಬೂಬ ತಿಕೋಟಾ ಇದ್ದರು. ಬೀದಿ ಬದಿಯ ವ್ಯಾಪಾರಿಗಳ ಸಂಘಟನೆಯ ಬೃಹತ್ ಸಮಾವೇಶದ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 