ಹುಣಶ್ಯಾಳದಲ್ಲಿ ಸುಂಗಠಾಣ ಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಸ್ವಾಗತ
A grand welcome to the Sungathana Siddeshwara Palakki Utsav in Hunashyal
ದೇವರಹಿಪ್ಪರಗಿ 07 : ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸುಗುಂಟಾಣ (ಸುಂಗಠಾಣ) ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಬಾಜಿ ಭಜಂತ್ರಿ ವೈಭವಗಳೊಂದಿಗೆ ಅದ್ದೂರಿಯಾಗಿ ಪಲ್ಲಕ್ಕಿ ಮೆರವಣಿಗೆಗೆ ಗ್ರಾಮಸ್ಥರು ಸ್ವಾಗತಿಸಿದರು. ಶುಕ್ರವಾರ ಸಾಯಂಕಾಲ ಪುರ ಪ್ರವೇಶ ಮಾಡಿದ ಪವಾಡ ಸಿದ್ದೇಶ್ವರನ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿ ಭಕ್ತರ ಸಡಗರಕ್ಕೆ ಕಾರಣವಾಯಿತು. ಸುಂಗಠಾಣ ಪವಾಡ ಸಿದ್ದೇಶ್ವರ ಭಕ್ತರ ಪಾಲಿನ ಇತಿಹಾಸವಾಗಿದ್ದಾರೆ. ಸುಮಾರು 6ತಾಲೂಕು 3ಜಿಲ್ಲೆಗಳಲ್ಲಿ ಹಾದು ಹೋಗುವ ಪಲ್ಲಕ್ಕಿ ಉತ್ಸವ ಸುಮಾರು 15 ದಿನಗಳ ಕಾಲ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕೂಡಲಸಂಗಮದಲ್ಲಿ ಗಂಗಾ ಸ್ಥಾನ ಮಾಡುವ ಮೂಲಕ ಯುಗಾದಿ ಹಬ್ಬಕ್ಕೆ ಆಗಮಿಸುತ್ತಾರೆ.
ಶುಕ್ರವಾರ ಸಾಯಂಕಾಲ 4ಗಂಟೆಗೆ ಗ್ರಾಮದ ಗುತ್ತಪ್ಪಗೌಡ ಕೋಟಿಖಾನಿ ಅವರ ತೋಟದಲ್ಲಿ ಪ್ರಸಾದ ಸೇವೆಗೈದು ಹಾಡಕಿ ಹೇಳುವ ಸಾಂಪ್ರದಾಯ. ನಂತರ ಗ್ರಾಮದ ಗುಂಡನಬಾವಿ ಹತ್ತಿರ ವಿಶ್ರಾಂತಿ ಪಡೆದು, ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರಿ ಬಸ್ ನಿಲ್ದಾಣದ ಹತ್ತಿರ ಪ್ರಸಾದ ಹಾಗೂ ಸಾರ್ವಜನಿಕರಿಗೆ ದರ್ಶನ ನೀಡುವುದು ಹಾಗೂ ಹಾಡಕಿ, ಡೊಳ್ಳಿನ ಪದಗಳು ವಾಲಗ ಬಲ ಜೋರಾಗಿ ನಡೆಯುತ್ತದೆ ನಂತರ ಸುಂಗಠಾಣ ಸಿದ್ದೇಶ್ವರರ ಹೆಳಕಿ ಬರುವಂತ ದಿನಗಳಲ್ಲಿ ಮುಂಗಾರು,ಹಿಂಗಾರು ಮಳೆಗಳ ಬಗ್ಗೆ (ಕಾರ್ಣಿಕ) ನುಡಿಯುವವರು. ಶನಿವಾರ ಸೂರ್ಯೋದಯಕ್ಕಿಂತ ಮುಂಚೆ ಗ್ರಾಮದಿಂದ ಪಡೇಕನೂರ ಮಾರ್ಗವಾಗಿ ಕೂಡಲಸಂಗಮಕ್ಕೆ ಪಲ್ಲಕ್ಕಿ ಉತ್ಸವದ ಪಾದಯಾತ್ರೆ ಜರುಗುವುದು.ಇದೇ ಸಂದರ್ಭದಲ್ಲಿ ಹುಣಶ್ಯಾಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 