ಹುಣಶ್ಯಾಳದಲ್ಲಿ ಸುಂಗಠಾಣ ಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಸ್ವಾಗತ
A grand welcome to the Sungathana Siddeshwara Palakki Utsav in Hunashyal
ದೇವರಹಿಪ್ಪರಗಿ 07 : ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸುಗುಂಟಾಣ (ಸುಂಗಠಾಣ) ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಬಾಜಿ ಭಜಂತ್ರಿ ವೈಭವಗಳೊಂದಿಗೆ ಅದ್ದೂರಿಯಾಗಿ ಪಲ್ಲಕ್ಕಿ ಮೆರವಣಿಗೆಗೆ ಗ್ರಾಮಸ್ಥರು ಸ್ವಾಗತಿಸಿದರು. ಶುಕ್ರವಾರ ಸಾಯಂಕಾಲ ಪುರ ಪ್ರವೇಶ ಮಾಡಿದ ಪವಾಡ ಸಿದ್ದೇಶ್ವರನ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿ ಭಕ್ತರ ಸಡಗರಕ್ಕೆ ಕಾರಣವಾಯಿತು. ಸುಂಗಠಾಣ ಪವಾಡ ಸಿದ್ದೇಶ್ವರ ಭಕ್ತರ ಪಾಲಿನ ಇತಿಹಾಸವಾಗಿದ್ದಾರೆ. ಸುಮಾರು 6ತಾಲೂಕು 3ಜಿಲ್ಲೆಗಳಲ್ಲಿ ಹಾದು ಹೋಗುವ ಪಲ್ಲಕ್ಕಿ ಉತ್ಸವ ಸುಮಾರು 15 ದಿನಗಳ ಕಾಲ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕೂಡಲಸಂಗಮದಲ್ಲಿ ಗಂಗಾ ಸ್ಥಾನ ಮಾಡುವ ಮೂಲಕ ಯುಗಾದಿ ಹಬ್ಬಕ್ಕೆ ಆಗಮಿಸುತ್ತಾರೆ.
ಶುಕ್ರವಾರ ಸಾಯಂಕಾಲ 4ಗಂಟೆಗೆ ಗ್ರಾಮದ ಗುತ್ತಪ್ಪಗೌಡ ಕೋಟಿಖಾನಿ ಅವರ ತೋಟದಲ್ಲಿ ಪ್ರಸಾದ ಸೇವೆಗೈದು ಹಾಡಕಿ ಹೇಳುವ ಸಾಂಪ್ರದಾಯ. ನಂತರ ಗ್ರಾಮದ ಗುಂಡನಬಾವಿ ಹತ್ತಿರ ವಿಶ್ರಾಂತಿ ಪಡೆದು, ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರಿ ಬಸ್ ನಿಲ್ದಾಣದ ಹತ್ತಿರ ಪ್ರಸಾದ ಹಾಗೂ ಸಾರ್ವಜನಿಕರಿಗೆ ದರ್ಶನ ನೀಡುವುದು ಹಾಗೂ ಹಾಡಕಿ, ಡೊಳ್ಳಿನ ಪದಗಳು ವಾಲಗ ಬಲ ಜೋರಾಗಿ ನಡೆಯುತ್ತದೆ ನಂತರ ಸುಂಗಠಾಣ ಸಿದ್ದೇಶ್ವರರ ಹೆಳಕಿ ಬರುವಂತ ದಿನಗಳಲ್ಲಿ ಮುಂಗಾರು,ಹಿಂಗಾರು ಮಳೆಗಳ ಬಗ್ಗೆ (ಕಾರ್ಣಿಕ) ನುಡಿಯುವವರು. ಶನಿವಾರ ಸೂರ್ಯೋದಯಕ್ಕಿಂತ ಮುಂಚೆ ಗ್ರಾಮದಿಂದ ಪಡೇಕನೂರ ಮಾರ್ಗವಾಗಿ ಕೂಡಲಸಂಗಮಕ್ಕೆ ಪಲ್ಲಕ್ಕಿ ಉತ್ಸವದ ಪಾದಯಾತ್ರೆ ಜರುಗುವುದು.ಇದೇ ಸಂದರ್ಭದಲ್ಲಿ ಹುಣಶ್ಯಾಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 