ಮಹಾನ್ ಕ್ರಾಂತಿಕಾರಿ ಚಂದ್ರ ಶೇಖರ್ ಆಜಾದ್ 94ನೇ ಹುತಾತ್ಮ ದಿನ ಆಚರಣೆ
94th Martyrdom Day Celebration of Great Revolutionary Chandra Shekhar Azad
ಮಹಾನ್ ಕ್ರಾಂತಿಕಾರಿ ಚಂದ್ರ ಶೇಖರ್ ಆಜಾದ್ 94ನೇ ಹುತಾತ್ಮ ದಿನ ಆಚರಣೆ
ಕೊಪ್ಪಳ 27: ಂಋಖಓ ಮತ್ತು ಂಋಙಓ ನೇತೃತ್ವದಲ್ಲಿ ಕೊಪ್ಪಳದ ಆಜಾದ್ ವೃತ್ತದ ಬಳಿ ಚಂದ್ರಶೇಖರ್ ಆಜಾದ್ ರವರ 94ನೇ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಂಋಙಓ ನ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ ಆಜಾದ್ ರವರು ನಮ್ಮ ಸ್ವತಂತ್ರ ಸಂಗ್ರಾಮದಲ್ಲಿ ಬಂದಿರುವಂತಹ ಮಹಾನ್ ಕ್ರಾಂತಿಕಾರಿಯಾಗಿದ್ದು, ರಾಜಿರಹಿತ ಹೋರಾಟವನ್ನು ಮಾಡುವ ಮೂಲಕ ಸ್ವಾತಂತ್ರ ನಂತರ ಭಾರತದಲ್ಲಿ ಸಮಸಮಾಜದ ಕನಸು ಕಂಡಂತಹ ಮಹಾನ್ ಹೋರಾಟಗಾರರಾಗಿದ್ದರು. ಹಲವಾರು ಕ್ರಾಂತಿಕಾರಿ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ಭಗತ್ ಸಿಂಗ್ ರವರ ಜೊತೆಗೂಡಿ ಸಾಮಾಜಿಕ ಕ್ರಾಂತಿಯ ಮೂಲಕವಾಗಿ ಜಾತಿ ವ್ಯವಸ್ಥೆ ,ಧಾರ್ಮಿಕ ಸಮಸ್ಯೆ, ಆರ್ಥಿಕ ಅಸಮಾನತೆಗಳ ನಿರ್ಮೂಲನೆಗೆ ರಾಜಿರಹಿತ ವಾದ ನಿರಂತರ ಹೋರಾಟ ಮಾಡಿರುವ ಮಹಾನ್ ವ್ಯಕ್ತಿ ಎಂದರು.ಈ ಸಂದರ್ಭದಲ್ಲಿ ಂಋಙಓ ರಾಜ್ಯ ಮುಖಂಡರಾದ ಶರಣು ಗಡ್ಡಿ, ಂಋಖಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ, ಸದಾಶಿವ ಮುನಿರಾಬಾದ್, ಹಿರಿಯರಾದ ಈಶ್ವರ್ಪ ದಿನ್ನಿ, ಶಿವಪ್ಪ ಹಡಪದ್, ಮಕ್ಬಲ್ ಕೊಪ್ಪಳ ವಿಜಯಕುಮಾರ್ ಬ್ಯಾಳಿ ಇನ್ನು ಅನೇಕರು ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 