ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಚರ್ಚ್ನ 81ನೇ ವಾರ್ಷಿಕೋತ್ಸವ
81st Anniversary of Christian Assembly Gospel Church
ಬಳ್ಳಾರಿ 17: ನಗರದ ಕೋಟೆಯ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಸೆಂಟರ್ ಚರ್ಚಿನ 81.ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಅಸೆಂಬ್ಲಿಯ ಪಾಸ್ಟರ್ ಆದ ಡೇವಿಡ್ ನೆರೆಲ್ಲ ಅವರು ಮಾತನಾಡಿ, ಈ ಚರ್ಚನ್ನು 1944 ರಲ್ಲಿ ಫಾಸ್ಟರ್ ಎಸ್.ಪ್ರಭುದಾಸ್ ಪ್ರಾರಂಬಿಸಿದರು. ನಂತರ ಅವರು ಕಾರಣಾಂತರಗಳಿಂದ ಆಂಧ್ರ್ರದೇಶದ ನಂದ್ಯಾಲ್ ಗೆ 1956 ರಲ್ಲಿ ಹೋಗುತ್ತಾರೆ, ನಂತರ ಆ ಒಂದು ಚರ್ಚಿನ ಎಲ್ಲಾ ಕಾರ್ಯಗಳನ್ನು ಫಾಸ್ಟರ್ ಹೆನ್ರಿ ಸಾಲ್ಮನ್ ನೆರೆಲ್ಲ ರವರು 31 ವರ್ಷಗಳ ಕಾಲ ಅವರು ನಡೆಸಿಕೊಂಡು ಬಂದರು. 1987ರಲ್ಲಿ ಅವರು ಸ್ವರ್ಗಸ್ಥರಾದ ನಂತರ 1991 ರಿಂದ ಈ ದಿನದವರೆಗೆ ಫಾಸ್ಟರ್ ಡೇವಿಡ್ ನೆರೆಲ್ಲ ರವರು ಈ ಚರ್ಚನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ಚರ್ಚಿನಲ್ಲಿ ಸುಮಾರು 140 ರಿಂದ - 150 ರಷ್ಟು ಕ್ರೈಸ್ತ ಸಮುದಾಯದ ಜನರು ಮತ್ತು ಚಿಕ್ಕ ಮಕ್ಕಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಆಗಸ್ಟ್ 15 ರಂದು ವಾರ್ಷಿಕೋತ್ಸವದ ನಿಮಿತ್ತ ಸಂಘದ ಜನರು ಸೇರಿ ಸ್ವಾತಂತ್ರ ದಿನೋತ್ಸವವನ್ನು ಸಹ ದೇಶದ ಭಕ್ತಿ ಗೀತೆಯನ್ನು ಹಾಡಿ 79ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಫಾಸ್ಟರ್ ನೆರೆಲ್ಲಾ ಡೇವಿಡ್ ತಿಳಿಸಿದರು. ಈ ಚರ್ಚ್ ಆದೀನದಲ್ಲಿ ಬಳ್ಳಾರಿ ನಗರದ 100 ಕಿ.ಮೀ ಅಂತರದಲ್ಲಿ ಒಟ್ಟು 19.ಚರ್ಚ್ ಗಳು ಇರುತ್ತವೆ, ಅವುಗಳು ಕಂಪ್ಲಿ, ರಾಯದುರ್ಗ ಹಾಗು ಕಲ್ಯಾಣದುರ್ಗ ತಾಲೂಕು ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ ಈ 19 ಚರ್ಚ್ ಗಳನ್ನು ಗಳನ್ನು ಒಟ್ಟು 13 ಜನ ಫಾಸ್ಟರ್ ಗಳು ನಡೆಸುತ್ತಿದ್ದಾರೆ ಎಂದು ಭಾಗ್ಯಲಕ್ಷ್ಮಿ ರವರು ಮಾಹಿತಿ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 