ಕೃಷಿ ಸಹಕಾರ ಸಂಘದ 66ನೇ ವಾರ್ಷಿಕ ಸರ್ವ ಸಾಧಾರಣ ಸಭೆ
66th Annual General Meeting of the Agricultural Cooperative Society
ಸಂಬರಗಿ, 25 : ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಹಾಗೂ ಮುಖಂಡರಾದ ವಿನಾಯಕ ಬಾಗಡಿ ಅವರ ಮಾರ್ಗದರ್ಶನದಲ್ಲಿ 2024-25 ನೇ ಸಾಲಿನಲ್ಲಿ, ಸಂಘವು 40 ಕೋಟಿ ಬಂಡವಾಳ ದುಡಿಯುತಿದ್ದು, 84.33 ಲಾಭ ಗಳಿಸಿದ್ದ ರೈತರಿಗೆ 13 ಪ್ರತಿಶತ ಸಾಲ ವಿತರಿಸಿದ್ದು, ಈ ವರ್ಷ ಸರ್ವ ಸಾಧಾರಣ ಸಭೆಯಲ್ಲಿ 14 ಪ್ರತಿಶತ ಹಂಚಲಾಗುದೇಂದು ಸಂಘದ ಅಧ್ಯಕ್ಷರಾದ ನಿಜಗುಣಿ ಮಗದುಮ್ಮ ಗೋಷಿಸಿದರು. ಬ್ಯಾಂಕ ಲೇವಲದಲ್ಲಿ ಎಮ್.ಪಿ.ಐ ಆದರೆ ಬ್ಯಾಂಕ ಸಾಲ ಕುಡಲಿಕೆ ಬರುವುದಿಲ್ಲ, ಎ.ಬಿ.ಎನ್ ಹೊಸ ಸಾಲ ಹಾಕಿದ್ದೇ ಆದರೆ ರೈತರಿಗೆ ತೊಂದರೆ ಆಗುತ್ತೆ, ಅಗತ್ಯಕ್ಕಿಂತ ಹೆಚ್ಚಿನ ಸಾಲ ಕೋಟ್ಟದ್ದೇ ಆದರೆ ಸಾಲ ವಸುಲಿ ಆಗದೆ ಕಟಬಾಕಿಗೆ ಬಂದು ಬಿಡುತ್ತೆ, ಹೈನುಗಾರಿಕೆಗೆ ಜಾಮೀನು ಸಾಲ 50 ಸಾವಿರಕ್ಕಿಂತ ಹೆಚ್ಚಿನ ಸಾಲ ನೀಡುವುದಿಲ್ಲ, ರೀ ಲೋಣ ಮಾಡಿ ಕೋಡಲಾಗುವುದು, ಅಧ್ಯಕ್ಷರಾದ ನಿಜಗುಣಿ ಮಗದುಮ್ಮ ಸ್ಪಷ್ಟ ಪಡೆಸಿದರು.
ಅವರು ಅಥಣಿ ತಾಲೂಕಿನ ಮದಭಾವಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 66 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಹಕಾರ ಸಂಘಗಳಲ್ಲಿ ಸಾಕಷ್ಟು ಪೈಪೋಟಿ ಇದ್ದಾಗ್ಯೂ ಕೂಡ ಸಂಘವು ಸಹಕಾರಿಯ ವ್ಯವಹಾರದಲ್ಲಿ ಪಾರದರ್ಶಕತೆ ಹಾಗೂ ಚಾಣಾಕ್ಷತೆಯಿಂದ ಕೆಲಸ ನಿರ್ವಹಿಸುತ್ತ ಎಲ್ಲ ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯ ಪಥದಲ್ಲಿಯೇ 'ಂ' ಕ್ಲಾಸ್ದಲ್ಲಿ ಸಾಗುತ್ತಿರುವುದು ನಮಗೆ ಹೆಮ್ಮೆಯೆನಿಸುತ್ತದೆ. 60 ವರ್ಷಗಳ ಮೇಲ್ಪಟ್ಟವರಿಗಾಗಿ ಎಫ್.ಡಿಗೆ ಬಡ್ಡಿ ಹೆಚ್ಚಿಗೆ ನೀಡಲಾಗುವುದು. 14ಅ ಡಿವುಡಂಟ್ ಕೋಡಲಾಗುವುದು, ಬಾಕಿ ಇರುವವ ಸಾಲ ವಸುಲಾತಿ ಮಾಡಲಾಗುತ್ತಿದೆ, 50 ಸಾವಿರ ಇದ್ದ ಸಾಲವನ್ನು 1 ಲಕ್ಷ ರೂಗಳಿಗೆ ಹೆಚ್ಚಿಸುವಂತೆ ಬ್ಯಾಂಕಿ ಗ್ರಾಹಕರು ಆಗ್ರಹಿಸಿದರು.ವರ್ಷದ ಅಂತ್ಯಕ್ಕೆ ಸಂಘದ ಒಟ್ಟು ಸದಸ್ಯರ ಸಂಖ್ಯೆ 3,270 ಇರುತ್ತದೆ ಹಾಗೂ ಸಹ ಸದಸ್ಯರುಗಳ ಸಂಖ್ಯೆ 3360 ಇರುತ್ತದೆ. ಶೇರು ಬಂಡವಾಳ ವರದಿ ವರ್ಷದ ಪ್ರಾರಂಭದಲ್ಲಿ ರೂ.2.23.26.205.00 ಇದ್ದದ್ದು ವಷಾಂರ್ತ್ಯಕ್ಕೆ ರೂ. 2,20,29,455.00 ರಷ್ಟು ಇರುತ್ತದೆ. ನಿಧಿಗಳು ವರ್ಷದ ಆರಂಭದಲ್ಲಿ ಒಟ್ಟು ನಿಧಿಯು ರೂ.4,09,95,644.15 ಇದ್ದು ವಷಾಂರ್ತ್ಯಕ್ಕೆ. 4,50,50,669.92, ಠೇವುಗಳು 2024-2025 ?. 15,20,83.170.34 2. ದುಡಿಯುವ ಬಂಡವಾಳ ಸನ್ 2024-2025 ನೇ ಸಾಲಿಗೆ ಒಟ್ಟು ದುಡಿಯುವ ಬಂಡವಾಳ 40,87,54,010.51, ವಾರ್ಷಿಕ ವಹಿವಾಟು ವರದಿ ವರ್ಷದಲ್ಲಿ ಸಂಸ್ಥೆಯು ರೂ.83,60,00,844.56 ವಹಿವಾಟು ಹೊಂದಿರುತ್ತದೆ. ಮುಖ್ಯ ಕಾರ್ಯ ನಿರ್ವಾಹಕರಾದ ಅಣ್ಣಾಸಾಬ ಮೆಂಡಿಗೇರಿ ವಾರ್ಷಿಕ ವರದಿಯನ್ನು ಓದಿದರು.
ಈ ವೇಳೆ ಈಶ್ವರ ಕುಂಬಾರ, ಅಪ್ಪು ಚಗಲಾ, ಇಂಗಾಪ್ಪ ನಿವಲಗಿ, ಸೊಮಲಿಂಗ ಮಗದುಮ್ಮ, ಸಾತಾಪ್ಪ ನಿವಲಗಿ, ಕಾಮಗೌಡ ಪಾಟೀಲ, ಜಿ.ಎಸ್.ತೋಡಕರ, ಸಂಜು ಪಾಟೀಲ, ಅಪ್ಪಣ್ಣಾ ಮಗದುಮ, ಉಪಾಧ್ಯಕ್ಷರಾದ ಅಶೋಕ ಪೂಜಾರಿ, ನಿರ್ದೇಶಕರರುಗಳಾದ ಅರ್ಜುನ ಇಬ್ರಾಹಿಂಪೂರ, ಭೀಮು ಚೌಗಲಾ , ಅಮಸಿದ ರೂಗಿ, ಮನೋಹರ ಪೂಜಾರಿ, ವಿಠ್ಠಲ ಅವಳಿ, ಮಲ್ಲಪ್ಪ ದೇವಕತ್ತೆ, ಸಿದರಾಯ ಪತಂಗಿ, ರಾವಸಾಬ, ಮಗದುಮ್ಮ, ಭೀಮಗೌಡ ನಾಯಿಕ, ಪ್ರಮೀಳಾ ಮೆಂಡಿಗೇರಿ, ಭಾಗ್ಯಶ್ರೀ ಸೂರ್ಯವಂಶಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 