ಲೋಕ ಅದಾಲತ್ನಲ್ಲಿ 47,179 ಪ್ರಕರಣಗಳು ಇತ್ಯರ್ಥ
47,179 cases disposed of in Lok Adalat
ಕಾರವಾರ 14: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ 26 ಪೀಠಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ 40,187 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ಬಾಕಿ ಇದ್ದ 6,992 ಪ್ರಕರಣಗಳು ಸೇರಿ ಒಟ್ಟೂ 47,179 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಲ ಮರು ಪಾವತಿ, ಪರಿಹಾರ, ದಂಡ ಸೇರಿದಂತೆ ಒಟ್ಟೂ 82,62,41,255 ರೂ. ಸಂಗ್ರಹ ಮಾಡಲಾಯಿತು. 171 ಬ್ಯಾಂಕ್ ಪ್ರಕರಣ, 23,049 ವಿದ್ಯುತ್, ನೀರು ಹಾಗು ಆಸ್ತಿ ಕರದ ಪ್ರಕರಣ, 493 ಕಾರ್ಮಿಕ ಪ್ರಕರಣ, 16,456 ಕ್ರಿಮಿನಲ್ ಪ್ರಕರಣ ಇತ್ಯರ್ಥ ಮಾಡಲಾಯಿತು. ನ್ಯಾಯಾಲಯದ ಮೆಟ್ಟಿಲೇರಿದ ಹಳಿಯಾಳದ ಮೂರು ಹಾಗೂ ಕಾರವಾರದ ಒಂದು ಪ್ರಕರಣದಲ್ಲಿ ವಿಚ್ಚೇದನ ಬಯಸಿದ್ದ ದಂಪತಿಗಳು ,ಮತ್ತೆ ಜೊತೆ ಜೀವನಕ್ಕೆ ಒಪ್ಪಿ, ರಾಜಿ ಮಾಡಿಕೊಂಡಿದ್ದಾರೆ. ಸಹಬಾಳ್ವೆಗೆ ಸಹಮತ ಮಾಡಿಕೊಂಡರು ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 