ಲೋಕ ಅದಾಲತ್ನಲ್ಲಿ 47,179 ಪ್ರಕರಣಗಳು ಇತ್ಯರ್ಥ
47,179 cases disposed of in Lok Adalat
ಕಾರವಾರ 14: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ 26 ಪೀಠಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ 40,187 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ಬಾಕಿ ಇದ್ದ 6,992 ಪ್ರಕರಣಗಳು ಸೇರಿ ಒಟ್ಟೂ 47,179 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಲ ಮರು ಪಾವತಿ, ಪರಿಹಾರ, ದಂಡ ಸೇರಿದಂತೆ ಒಟ್ಟೂ 82,62,41,255 ರೂ. ಸಂಗ್ರಹ ಮಾಡಲಾಯಿತು. 171 ಬ್ಯಾಂಕ್ ಪ್ರಕರಣ, 23,049 ವಿದ್ಯುತ್, ನೀರು ಹಾಗು ಆಸ್ತಿ ಕರದ ಪ್ರಕರಣ, 493 ಕಾರ್ಮಿಕ ಪ್ರಕರಣ, 16,456 ಕ್ರಿಮಿನಲ್ ಪ್ರಕರಣ ಇತ್ಯರ್ಥ ಮಾಡಲಾಯಿತು. ನ್ಯಾಯಾಲಯದ ಮೆಟ್ಟಿಲೇರಿದ ಹಳಿಯಾಳದ ಮೂರು ಹಾಗೂ ಕಾರವಾರದ ಒಂದು ಪ್ರಕರಣದಲ್ಲಿ ವಿಚ್ಚೇದನ ಬಯಸಿದ್ದ ದಂಪತಿಗಳು ,ಮತ್ತೆ ಜೊತೆ ಜೀವನಕ್ಕೆ ಒಪ್ಪಿ, ರಾಜಿ ಮಾಡಿಕೊಂಡಿದ್ದಾರೆ. ಸಹಬಾಳ್ವೆಗೆ ಸಹಮತ ಮಾಡಿಕೊಂಡರು ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 