ಹುಬ್ಬಳ್ಳಿ 12: ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಎಸ್ಡಿಎಂ ಧಾರವಾಡ ಮತ್ತು ಕೆಎಲ್ಇ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕ ವೈದ್ಯರ ಸಂಘ ಹುಬ್ಬಳ್ಳಿ - ಧಾರವಾಡ ಶಾಖೆ ವತಿಯಿಂದ ಜೂನ್ 13, 14 ಮತ್ತು 15 ರಂದು 42 ನೇ ಕಾಪಿಕಾನ್ 2025 ಸಮ್ಮೇಳನವನ್ನು ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಪಿಕಾನ್ ಆಯೋಜನಾ ಸಮಿತಿಯ ಅಧ್ಯಕ್ಷರಾದ ಡಾ.ಈಶ್ವರ ಹಸಬಿ ಹೇಳಿದರು.
ಇಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 13 ರಂದು ಸಂಜೆ 6 ಗಂಟೆಗೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಡಾ. ಜ್ಯೋತಿರ್ಮಯ ಪಾಲ್ ಹಾಗೂ ಡಾ.ನರಸಿಂಹಲು ಅವರು ಭಾಗವಹಿಸುವರು. 2014 ರ ನಂತರ ಈ ಸಮ್ಮೇಳನವನ್ನು ಸಂಸ್ಥೆಯಲ್ಲಿ ಆಯೋಜಿಸಲಾಗುತ್ತಿದೆ. ತೆಲಂಗಾಣ, ಆಂಧ್ರ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವೈದ್ಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಸಂಶೋಧಕರು ಆರೋಗ್ಯ ಸೇವಾ ವೃತ್ತಿಪರರು ಸೇರಿದಂತೆ ಸುಮಾರು 1800 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನೀರೀಕ್ಷೆಯಿದೆ. ಈಗಾಗಲೇ 1635 ಜನರು ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನಕ್ಕೆ ಎಪಿಐ ದಕ???ಣ ಮಧ್ಯ ವಲಯ ಮತ್ತು ಎಪಿಐ ದಕ???ಣ ವಲಯ ಸಹ ಸಹಕಾರ ನೀಡುತ್ತಿವೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚಿನ ಪ್ರಗತಿಗಳು, ಹೊಸ ಅಭ್ಯಾಸಗಳು ಮತ್ತು ಉದಯೋನ್ಮುಖ ಸವಾಲುಗಳ ಚರ್ಚೆ ಸಮ್ಮೇಳನದ ಉದ್ದೇಶವಾಗಿವೆ. "ಮನಸ್ಸುಗಳನ್ನು ಒಗ್ಗೂಡಿಸುವುದು, ಮುಂದುವರಿದ ಆರೈಕೆ" ಈ ಸಮ್ಮೇಳನದ ಧ್ಯೇಯವಾಕ್ಯವಾಗಿದೆ ಎಂದರು.
ಸಮ್ಮೇಳನದಲ್ಲಿ 85 ವಿಚಾರ ಗೋಷ್ಠಿಗಳು ಮತ್ತು 900 ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಇದರಲ್ಲಿ ಸಂಶೋಧನೆ, ಆಂತರಿಕ ಓಷಧ, ಹೃದ್ರೋಗ, ಸಾಂಕ್ರಾಮಿಕ ರೋಗಗಳು, ನಿರ್ಣಾಯಕ ಆರೈಕೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮುಂತಾದ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.
ಕಾಪಿಕಾನ್ ಆಯೋಜನಾ ಸಮಿತಿಯ ಮುಖ್ಯ ಸಲಹೆಗಾರರಾದ ಡಾ.ಜಿ.ಬಿ.ಸತ್ತೂರ ಅವರು ಮಾತನಾಡಿ, ಈ ಸಮ್ಮೇಳನದಲ್ಲಿ ಪ್ರಮುಖವಾಗಿ ಮೂರು ಕಾರ್ಯಾಗಾರಗಳು ನಡೆಯಲಿವೆ. ಡಾ. ಸುನೀಲ್ ಕರಿ, ಡಾ. ರಾಜೀವ್ ಜೋಶಿ ಮತ್ತು ಅವರ ತಂಡದಿಂದ ಮಧುಮೇಹ ಪಾದ ಕಾರ್ಯಾಗಾರ, ಡಾ.ಶೈಲೇಂದ್ರ .ಡಿ.ಎಸ್, ಡಾ.ಗಂಗಾಧರ್ ಸಿ.ಪಾಟೀಲ್ ಮತ್ತು ಅವರ ತಂಡದಿಂದ ಚೆಸ್ಟ ಅಲ್ಟ್ರಾ ಸೋನೊಗ್ರಾಫಿ ಇನ್ ಕ್ರಿಟಿಕಲ್ ಕೇರ್, ಐಸಿಯ ಕಾರ್ಯಾಗಾರ ಮತ್ತು ಬೆಂಗಳೂರಿನ ಡಾ. ಪ್ರದೀಪ್ ರಂಗಪ್ಪ ಮತ್ತು ಅವರ ತಂಡವು ಯಾಂತ್ರಿಕ ವೆಂಟಿಲೇಷನ್ ಕಾರ್ಯಾಗಾರಗಳು ನಡೆಯುತ್ತವೆ. 500 ಕ್ಕೂ ಹೆಚ್ಚು ಪೋಸ್ಟರ್ಗಳನ್ನು ಸ್ನಾತಕೋತ್ತರ ಪದವೀಧರರು ಪ್ರಸ್ತುತಪಡಿಸಲಿದ್ದಾರೆ. ಓಷಧ ಮಳಿಗೆಗಳು, ಇಳಕಲ್ ಸೀರೆ ಸೇರಿದಂತೆ 35 ಕ್ಕೂ ಅಧಿಕ ಮಳಿಗೆಗಳನ್ನು ಸಮ್ಮೇಳನದಲ್ಲಿ ಕಾಣಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ರಾಘವೇಂದ್ರ ಬೆಳಗಾಂವ್ಕರ್, ಡಾ.ಚಂದ್ರಶೇಖರ, ಡಾ.ಉದಯ ಬಂಡೆ, ಡಾ. ಕಿರಣ, ಡಾ.ಅವಿನಾಶ ಇಟಗಿ ಸೇರಿದಂತೆ ಇತರರು ಹಾಜರಿದ್ದರು.
ಲಿಡಕರ್ ಮಾರಾಟ ಮಳಿಗೆ; ಶಾಲಾ ಮಕ್ಕಳ ಬಿಳಿ ಮತ್ತು ಕಪ್ಪು ಬೂಟು, ಸಾಕ್ಸ ಆಕರ್ಷಿತ ಬೆಲೆಗಳಲ್ಲಿ ಮಾರಾಟ
ಹುಬ್ಬಳ್ಳಿ 12: ಇಲ್ಲಿನ ಐ.ಟಿ.ಪಾರ್ಕ್ ನಲ್ಲಿರುವ ಲಿಡಕರ್ ಮಾರಾಟ ಮಳಿಗೆಯಲ್ಲಿ ಆಕರ್ಷಿತ ಬೆಲೆಗಳಲ್ಲಿ ಒಂದೇ ಸೂರಿನಡಿ ಶಾಲಾ ಮಕ್ಕಳ ಕಪ್ಪು ಮತ್ತು ಬಿಳಿ ಬಣ್ಣದ ವೆಲ್ಡ್, ಲೇನ್ ಬೂಟುಗಳು ಹಾಗೂ ಸಾಕ್ಸಗಳು ದೊರೆಯುತ್ತವೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಲಿಡಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.