ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ
354th Aradhana Mahotsav of Raghavendra Swami
ಕೊಪ್ಪಳ 13: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಇಲ್ಲಿನ ರಾಯರ ಮಠದಲ್ಲಿ ಸೋಮವಾರ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.ಮಧ್ಯಾರಾಧನೆ ಅಂಗವಾಗಿ ರಾಯರ ವೃಂದಾವನಕ್ಕೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥಪ್ರಸಾದ ಸೇರಿದಂತೆ ಜರುಗಿದವು.
ಸಂಜೆ ಹುಬ್ಬಳ್ಳಿಯ ವಿಜಯಕುಮಾರ ಪಾಟೀಲ ಅವರಿಂದ ಭಕ್ತಿ ಸಂಗೀತ, ಪಂಡಿತ್ ಪುರಸ್ಕಾರ, ರಾಘವೇಂದ್ರ ವಿಜಯ ಪ್ರವಚನ ಮಂಗಲ ಮಹೋತ್ಸವ ಇದ್ದವು. ರಾತ್ರಿ ನಡೆದ ಲಘು ರಥೋತ್ಸವದ ಸುತ್ತಲೂ ಸಾಗಿ ಭಕ್ತರು ತಮ್ಮ ಭಕ್ತಿ ಸಮರ್ಿಸಿದರು. ಈ ವೇಳೆ ರಾಯರ ಹಾಡುಗಳನ್ನು ಸ್ತುತಿಸಲಾಯಿತು. ಬಳಿಕ ಮಹಿಳೆಯರು ಕೋಲಾಟವಾಡಿದರು. ತೊಟ್ಟಿಲು ಸೇವೆಯಲ್ಲಿ ಮಹಿಳೆಯರು ತೊಟ್ಟಿಲು ತೂಗಿ ನಮಸ್ಕರಿಸಿದರು. ಎರಡು ದಿನಗಳಿಂದ ನಡೆಯುತ್ತಿರುವ ಆರಾಧನೆಯಲ್ಲಿ ಎಲ್ಲ ಜಾತಿಗಳ ಸಾವಿರಾರು ಸಂಖ್ಯೆಯ ಭಕ್ತರು ಮಠದಲ್ಲಿ ಬಂದು ಪ್ರಸಾದ ಸೇವಿಸಿದರು. ಮಧ್ಯಾಹ್ನ 1.30ರಿಂದ ಆರಂಭವಾದ ಪ್ರಸಾದ ಸಂಜೆ ತನಕ ನಡೆಯಿತು.
ಗೌರವ ಸನ್ಮಾನ: ಭಾನುವಾರ ರಾತ್ರಿ ನಡೆದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಿಕಾರಂಗ ಮತ್ತು ಹೋರಾಟ ಕ್ಷೇತ್ರದ ಸಾಧನೆಗೆ ಸಂತೋಷ ದೇಶಪಾಂಡೆ, ಶಂಕರ ಬಿನ್ನಾಳ (ಸಂಗೀತ), ಜಪದ ಮೇಲೆ ಪಿ.ಎಚ್ಡಿ ಮಾಡಿದ ಸಾಧಕ ಹನುಮಂತರಾವ್ ಕುಲಕರ್ಣಿ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಸುನಿತಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 