ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು
28 black rhinos die at Kittur Rani Channamma Zoo
ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು
ಲೋಕ ದರ್ಶನ ವರದಿ
ಬೆಳಗಾವಿ 16 : ನಗರದ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಒಟ್ಟು 28ಕೃಷ್ಣ ಮೃಗಗಳು ಮೃತಪಟ್ಟಿವೆ.
ಬ್ಯಾಕ್ಟಿರಿಯಾ ಇನ್ಫೆಕ್ಷನ್ನಿಂದ ಸಾವುನ್ನಪ್ಪಿವೆ. ಒಟ್ಟು 38 ಕೃಷ್ಣ ಮೃಗಗಳಿದ್ದು ನ.13ಕ್ಕೆ 8 ಸಾವನ್ನಪ್ಪಿವೆ. ಅವುಗಳ ಪೋಸ್ಟ ಮಾರ್ಟಂ ಸ್ಯಾಂಪಲ್ಸನ್ನು ಬನ್ನೇರು ಘಟ್ಟ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಲ್ಯಾಬ್ ರಿಪೋರ್ಟ ಬರುವ ಮುಂಚೆ ಮತ್ತೆ 20 ಮೃಗಗಳು ಸಾವನ್ನಪ್ಪಿದ್ದು ಅಂತ್ಯಕ್ರಿಯೆ ಮಾಡಲಾಗಿದೆ. ಸದ್ಯಕೆ 10ಪ್ರಾಣಿಗಳು ಉಳಿದಿದ್ದು ಅವುಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ನಿರ್ದೇಶಕ ನಾಗರಾಜ ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಮೃಗಾಲಯದಲ್ಲಿ ಈ ಪ್ರಾಣಿಗಳಿದ್ದು ಅವುಗಳಿಗೆ ಯಾವದೆ ಹಾನಿ ಉಂಟಾಗಿಲ್ಲ. ರಿಪೋರ್ಟ ಲ್ಯಾಬಗೆ ಕಳಿಸಲಾಗಿದ್ದು ಸ್ಥಳವನ್ನು ಪರೀಶೀಲಿಸಲು ಬೆಂಗಳೂರಿನ ವೈದ್ಯತಂಡ ಆಗಮಿಸಲಿದೆ. ಸದ್ಯಕ್ಕೆ ಪ್ರವಾಸಿಗರಿಗೆ ಉಳಿದೆಲ್ಲ ಪ್ರಾಣಿಗಳನ್ನು ನೋಡಲು ಯಾವದೆ ನಿರ್ಬಂಭವಿಲ್ಲ. ಆದರೆ ಕೃಷ್ಣಮೃಗಗಳು ಇರುವ ಪ್ರದೇಶಕ್ಕೆ ಮಾತ್ರ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 