211 ಕಲಾವಿದರಿಂದ 'ಸ್ವಾವಲಂಬಿ ಭಾರತ' ಪ್ರೇರಿತ ಹಾಡು
ನವದೆಹಲಿ, ಮೇ 18, ಜಾಗತಿಕ ಸಾಂಕ್ರಾಮಿಕ ಕೊರೊನಾದ ಹರಡುವಿಕೆಯನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಲಾಗಿದ್ದು, ಈ ಮಧ್ಯೆ 211 ಕಲಾವಿದರು 'ಸ್ವಾವಲಂಬಿ ಭಾರತ' ಪ್ರೇರಿತವಾದ ಹಾಡನ್ನು ಹಾಡಿದ್ದಾರೆ.ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಜನರ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ, ದೇಶಾದ್ಯಂತದ ಜನಪ್ರಿಯ ಗಾಯಕರು ಒಂದು ಹಾಡನ್ನು ರಚಿಸಿದ್ದಾರೆ. ಇದು ದೇಶದ ವಿಷಮ ಪರಿಸ್ಥಿತಿಯಲ್ಲಿ ಜನರನ್ನು ರೋಮಾಂಚನಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹಾಡಿನ ಪೂರ್ಣ ಹೆಸರು 'ಒನ್ ನೇಷನ್ ಒನ್ ವಾಯ್ಸ್ - ಜಯತು ಜಯತು ಭಾರತಮ್'.ದೇಶದ 200 ಕ್ಕೂ ಹೆಚ್ಚು ಪ್ರಸಿದ್ಧ ಗಾಯಕರು ಜಯತು ಜಯತು ಭಾರತಂ ಗೀತೆಗೆ ಧ್ವನಿ ನೀಡಿದ್ದಾರೆ. ಆಶಾ ಭೋಸ್ಲೆ, ಎಸ್ಪಿ ಬಾಲಸುಬ್ರಹ್ಮಣ್ಯಂ, ಶಂಕರ್ ಮಹಾದೇವನ್, ಸೋನು ನಿಗಮ್ ಮತ್ತು ಕೈಲಾಶ್ ಖೇರ್ ಅವರು ಸಹ ಗೀತೆಗೆ ಧ್ವನಿ ಗೂಡಿಸಿದ್ದಾರೆ. ಈ ಹಾಡನ್ನು ಪ್ರಸೂನ್ ಜೋಶಿ ಬರೆದಿದ್ದು, ಈ ಹಾಡನ್ನು 12 ಭಾಷೆಗಳಲ್ಲಿ ಸಂಯೋಜಿಸಲಾಗಿದೆ. ಸುರ್-ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು "ನಮಸ್ಕರ್" ಹಾಡಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಮ್ಮ ಅತ್ಯಂತ ಪ್ರತಿಭಾವಂತ 211 ಕಲಾವಿದರು ಈ ಹಾಡನ್ನು ಸಂಯೋಜಿಸಿದ್ದಾರೆ. ಇದು ಸ್ವಾವಲಂಬಿ ಭಾರತದ ಉತ್ಸಾಹದಿಂದ ಪ್ರೇರಿತವಾಗಿದೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 