13 ಆಕಳು ವಿವಿಧ ಗೋಶಾಲೆಗಳಿಗೆ ಸ್ಥಳಾಂತರ
ಹುಬ್ಬಳ್ಳಿ-ಧಾರವಾಡ, 06 : ಮಹಾನಗರ ಪಾಲಿಕೆಯ ವಲಯ ವ್ಯಾಪ್ತಿಯಲ್ಲಿ ದಿನಾಂಕ: 06-06-2025 ರಂದು ಸಾರ್ವಜನಿಕರ ದೂರಿನ ಮೇರೆಗೆ ಹುಬ್ಬಳ್ಳಿ ನಗರದ ಸ್ಟೇಶನ್ ರಸ್ತೆಯಲ್ಲಿ ಬಿಡಾಡಿ ಜಾನುವಾರುಗಳ ಕಾರ್ಯಾಚರಣೆಯನ್ನು ಮಾನ್ಯ ಅಧ್ಯಕ್ಷರು, ಶ್ರೀ ರಾಜಣ್ಣ ಕೊರವಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ವ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಹಾಗೂ ಸದರಿ ಸಮಿತಿಯ ಗೌರವಾನ್ವಿತ ಸದಸ್ಯರಾದ ಇಕ್ಬಾಲ ನವಲೂರ, ಆರೋಗ್ಯಾಧಿಕಾರಿಗಳಾದ ಡಾಽಽ ಶ್ರೀಧರ ದಂಡಪ್ಪನವರ, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾಽಽ ಎ. ಜಿ. ಕುಲಕರ್ಣಿ ಹಾಗೂ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸದರಿ ಕಾರ್ಯಾಚರಣೆಯಲ್ಲಿ 13 ಆಕಳುಗಳನ್ನು ಹಿಡಿದು, ವಿವಿಧ ಗೋಶಾಲೆಗಳಿಗೆ ಸ್ಥಳಾಂತಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ಜಾನುವಾರುಗಳ ಮಾಲಿಕರು ತಮ್ಮ ಜಾನುವಾರುಗಳನ್ನು ಸುಪರ್ಧಿಗೆ ಪಡೆದಕೊಂಡು ವ್ಯವಸ್ಥಿತವಾಗಿ ಸಾಕಿಕೊಳ್ಳಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಇದೇ ರೀತಿಯ ಕಾರ್ಯಾಚರಣೆಯನ್ನು ಪಾಲಿಕೆಯ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಮಾಡಲಾಗುವುದು.