ಜೊಯಿಡಾ ತಾಲೂಕು ರಾಮನಗರ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತರ ಬಲೆಗೆ

	 ಜೊಯಿಡಾ ತಾಲೂಕು ರಾಮನಗರ  ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತರ  ಬಲೆಗೆ Zoida taluk Ramanagar village accountant in the trap of Lokayukta

ಲೋಕದರ್ಶನ ವರದಿ 

ದಾಂಡೇಲಿ - ಮಾ. 13 : ಜೋಯಿಡಾ ತಾಲೂಕಿನ ರಾಮನಗರದಲ್ಲಿ ಲಂಚ ಸ್ವೀಕರಿಸುವ ವೇಳೆ ಗ್ರಾಮ ಆಡಳಿತಾಧಿಕಾರಿ ಸಂತೋಷ ಮ್ಯಾಗೇರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಜರುಗಿದೆ. ಗ್ರಾಮ ಆಡಳಿತಾಧಿಕಾರಿ  ಸಂತೋಷ ಮ್ಯಾಗೇರಿ ದಾಖಲಾತಿ ಬದಲಾವಣೆ ಮಾಡುವದಕ್ಕಾಗಿ ಸಂದೇಶ  ಶರದ್ ಗುರ್ಜರ್ ಅವರಿಂದ 18 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆೆನ್ನಲಾಗಿದೆ. ಬಳಿಕ ನಡೆದ ಮಾತುಕತೆಯ ನಂತರ 13 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಸಿ.ಪಿ.ಐ ವಿನಾಯಕ ಬಿಲ್ಲವ ಅವರ ನೇತ್ರತ್ವ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಸಂತೋಷ ಮ್ಯಾಗೇರಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.