ಡಿ. 8ರಿಂದ ಯಶವಂತಪುರ-ಹೊಸಪೇಟೆ-ವಿಜಯಪುರ ರೈಲು ಸಂಚಾರ
Yeshwantpur-Hospet-Vijayapura train service from December 8
ಡಿ. 8ರಿಂದ ಯಶವಂತಪುರ-ಹೊಸಪೇಟೆ-ವಿಜಯಪುರ ರೈಲು ಸಂಚಾರ
ಹೊಸಪೇಟೆ 17: ಕೇಂದ್ರ ಸರ್ಕಾರದ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದ, ದಿ. ಸುರೇಶ್ಅಂಗಡಿ ಅವರ ಅವಧಿಯಲ್ಲಿ 2019ರಲ್ಲಿ ಚಾಲನೆ ನೀಡಲಾಗಿರುವ ಯಶವಂತಪುರ-ಹೊಸಪೇಟೆ-ವಿಜಯಪುರ ವಿಶೇಷ ರೈಲು ಬರುವ ಡಿಸೆಂಬರ್ 8 ರಿಂದ ಸಾಮಾನ್ಯಎಕ್ಸ್ಪ್ರೇಸ್ ಹಾಗೂ ಖಾಯಂರೈಲ್ಆಗಿ ಸಂಚರಿಸಲಿದೆ. ರೈಲು ನಿಯಮಿತವಾಗಿ ಪರಿವರ್ತನೆಯಾಗಿ ಸಂಚರಿಸುವುದರಿಂದ ಪ್ರಯಾಣ ಧರದಲ್ಲಿ ಶೇಕಡ 25ಅ ರಿಂದ 30ಅ ರಷ್ಟು ಇಳಿಕೆಯಾಗುತ್ತದೆ. ಅಲ್ಲದೇ ಖಾಯಂ ರೈಲುಗಳಲ್ಲಿ ಸಾಕಷ್ಟು ಮುಂಚಿತವಾಗಿಅಂದರೆ 60ದಿನ ಮೊದಲೇ ಸೀಟು ಕಾಯ್ದಿರಿಸಲು ಅವಕಾಶ ವಿದ್ದರೆ, ವಿಶೇಷ ರೈಲುಗಳಲ್ಲಿ ಈ ಸೌಲಭ್ಯಇರುವುದಿಲ್ಲ. ರೈಲ್ವೇಇಲಾಖೆಯುಯಾವುದೇ ಮುನ್ಸೂಚನೆ ನೀಡದೇ ವಿಶೇಷ ರೈಲುಗಳ ಸಂಚಾರವನ್ನುರದ್ದುಪಡಿಸಲುಅವಕಾಶವಿದ್ದರೆ, ಖಾಯಂ ರೈಲುಗಳ ಸಂಚಾರವನ್ನುರದ್ದುಪಡಿಸುವಂತಿಲ್ಲಹಾಗೂ ಸಾಮಾನ್ಯಎಕ್ಸ್ಪ್ರೇಸ್ ರೈಲುಗಳಲ್ಲಿ ಪ್ರಯಾಣೀಕರಿಗೆ ಹೆಚ್ಚುವರಿ ಸೌಲಭ್ಯಗಳೂ ದೊರೆಯುತ್ತವೆ. ವಿಶೇಷ ರೈಲುಖಾಯಂರೈಲು ಆಗಿ ಸಂಚಾರದ ನಂತರಯಶವಂತಪುರ-ಹೊಸಪೇಟೆ-ವಿಜಯಪುರರೈಲಿನ ಸಂಖ್ಯೆ : 16547/16548 ಆಗುತ್ತದೆ. ಈ ವಿಶೇಷ ರೈಲನ್ನು ಖಾಯಂ ರೈಲು ಆಗಿ ಪರಿವರ್ತಿಸುವಂತೆ ಕಳೆದ 2-3 ವರ್ಷಗಳಿಂದ ವಿಜಯನಗರ ರೈಲ್ವೇ ಬಳಕೆದಾರರ ಸಂಘ ಹಾಗೂನೈರುತ್ಯರೈಲ್ವೇ ಬಳಕೆದಾರರ ಸಲಹಾ ಸಮಿತಿ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ಅವರಿಂದ ನೈರುತ್ಯರೈಲ್ವೇ ವಲಯದ ಪ್ರದಾನ ವ್ಯವಸ್ಥಾಪಕರು ಹಾಗೂ ರೈಲ್ವೇ ಮಂಡಳಿಗೆ ಮನವಿ ಸಲ್ಲಿಸಿದ್ದು, ಬೇಡಿಕೆಗೆ ಸ್ಪಂದಿಸಿರುವ ನೈರುತ್ಯರೈಲ್ವೇ ವಲಯದ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 