ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮ
ಕೊಪ್ಪಳ 08: ವಿಶ್ವ ಕ್ಯಾನ್ಸರ್ ಅರಿವು ಮೂಡಿಸುವ ದಿನ ಮತ್ತು ಸಪ್ತಾಹದ ಅಂಗವಾಗಿ ಶುಕ್ರವಾರ ರಂದು ಸಮುದಾಯ ಆರೋಗ್ಯ ಕೇಂದ್ರ ಹಿರೇಸಿಂದೋಗಿಯಲ್ಲಿ ಕಲಬುರಿಗಿಯ ಸ್ವಾಮೀ ರಾಮಾನಂದ ತೀರ್ಥ ಸಾಮಾಜಿಕ ಆರ್ಥಿಕ ರಾಷ್ಟ್ರಯ ಭಾವೈಕ್ಯತೆ ಮತ್ತು ಸಂಶೋಧನಾ ಸಂಸ್ಥೆ, ಕೋಪ್ಪಳ ಮತ್ತು ಕೊಪ್ಪಳದ ರೇಣುಕಾ ಡೈಗನೋಸ್ಟಿಕ್ಸ್ ಅಂಡ್ ಆರ್. ಸಿ, ಜನನಿ ಆಸ್ಪತ್ರೆ ಕೊಪ್ಪಳ ಮತ್ತು ಅಥರ್ವ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಸತತವಾಗಿ ನಾಲ್ಕನೇ ವರ್ಷ ವಿಶ್ವ ಕ್ಯಾನ್ಸರ್ ದಿನಾಚರಣೆಯ ಹಾಗೂ ಸಪ್ತಾಹದ ನಿಮಿತ್ತ ಕಾನ್ಸರ್ ಬಗ್ಗೆ ಅರಿವು ಮತ್ತು ಸ್ಕ್ರೀನ್ನಿಂಗ್ ಕಾರ್ಯಕ್ರಮ ಜರುಗಿತು.
ಸುಮಾರು ಎಪ್ಪತ್ತು ಜನರ ಉಚಿತ ತಪಾಸಣೆ ಮಾಡಲಾಗಿ, ಸುಮಾರು ಮೂವತ್ತು ಮಹಿಳೆಯರ ಸರ್ವಿಕಲ್ ಪ್ಯಾಪ್ ಸ್ಮಿಯರ್ ಸ್ಟಡಿ ಟೆಸ್ಟ್ಗಳನ್ನು ಉಚಿತವಾಗಿ ಮಾಡಲಾಯಿತು. ತಂಬಾಕು ಬಳಕೆ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಪರಿಸರ ಮಾಲಿನ್ಯ, ಬದಲಾದ ಇಂದಿನ ಜೀವನಶೈಲಿ ಕಾನ್ಸರ್ ರೋಗಕ್ಕೆ ಕಾರಣಗಳೆಂಬ ವಿಷಯ ತಿಳಿಸಲಾಯಿತು.
ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು. ಕ್ಯಾನ್ಸರ್ ತಡೆಗಟ್ಟುವ, ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚುವ ಹಾಗೂ ರೋಗವನ್ನು ಪತ್ತೆ ಹಚ್ಚಿ ಚಿಕೆತ್ಸೆ ನೀಡುವ ಕುರಿತು ಪರಿಣಿತರಿಂದ ಅರಿವು ಮೂಡಿಸಲಾಯಿತು.ಈ ಸಂಧರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ ರಮೇಶ ಮೂಲಿಮನಿ,ಪ್ರಸೂತಿ ್ಘ ಸ್ತ್ರೀರೋಗ ತಜ್ಞರು ಮಾತನಾಡುತ್ತ ಕ್ಯಾನ್ಸರ್ ನಿಂದ ಉಂಟಾಗುವ ಸಾವುಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ವಾಸನೆಯಿಂದ ಕೂಡಿದ ಬಿಳಿಮುಟ್ಟು, ರಕ್ತಸ್ರಾವ ಆಗುವದು, ತೂಕ ಕಡಿಮೆ ಆಗುವದು, ಹಸಿವು ಆಗದೆ ಇರುವದು ್ಘ ಹೊಟ್ಟೆನೋವು ಇಂತಹ ಲಕ್ಷಣಗಳಿದ್ದವರು ತಪಾಸಣೆಗೆ ಒಳಗಾಗುವ ಮೂಲಕ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ತಡೆಯಬಹುದಾಗಿದೆ ಎಂದು ತಿಳಿಸುತ್ತ ಲಭ್ಯವಿರುವ ಚಿಕಿತ್ಸೆಗಳ ಮಾಹಿತಿ ಕೊಟ್ಟರು.
ಕಿಮ್ಸನ ಪ್ಯಾಥಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಡಾ ಅನಿರುದ್ಧ ವಸಂತ ಕುಷ್ಟಗಿ ಮಾತನಾಡಿ ತಂಬಾಕು ಸೇವನೆ ಮಾಡುವವರಲ್ಲಿ ತುಟಿ, ಬಾಯಿ, ಪುಪ್ಪಸ, ಗಂಟಲು, ಅನ್ನನಾಳಲ್ಲಿ, ಸ್ಥನದ ಕ್ಯಾನ್ಸರ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಆದ್ದರಿಂದ ತಂಬಾಕನ್ನು ತ್ಯಜಿಸಿರಿ ಕ್ಯಾನ್ಸರ್ ತಡೆಯಿರಿ ಹಾಗೂ ಆರೋಗ್ಯವನ್ನು ರಕ್ಷಿಸಿಕೊಳ್ಳೋಣ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಕಿಮ್ಸ್ ಕೊಪ್ಪಳದ ಸಹಾಯಕ ಪ್ರಧ್ಯಾಪಕ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ ಸುಮನ್ ಪಾಟೀಲ್ಮಾ ತನಾಡುತ್ತ ಕ್ಯಾನ್ಸರ್ ನಿಂದ ಉಂಟಗುವ ಸಾವುಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ವಾಸನೆಯಿಂದ ಕೂಡಿದ ಬಿಳಿಮುಟ್ಟು, ಮುಟ್ಟು ನಿಂತಮೇಲೂ ರಕ್ತಸ್ರಾವ ಆಗುವದು, ತೂಕ ಕಡಿಮೆ ಆಗುವದು, ಹಸಿವು ಆಗದೆ ಇರುವದು ್ಘ ಹೊಟ್ಟೆನೋವು ಇಂತಹ ಲಕ್ಷಣಗಳು ಇದ್ದಾಗ ತಪಾಸಣೆಗೆ ಒಳಗಾಗಬೇಕು ಇವು ಕ್ಯಾನ್ಸರ ಲಕ್ಷಣಗಳಾಗಿರಬಹುದು, ಆದುದರಿಂದ ವೈದ್ಯರನ್ನು ಭೇಟಿ ಆಗಿ ಸಲಹೆ ಪಡೆಯಬೇಕು, ಪ್ರಾರಂಭಿಕ ಹಂತದಲ್ಲೆ ರೋಗಗಳನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಉತ್ಸಾಹದಿಂದ ಬದುಕು ಸಾಗಿಸಬಹುದು ಹಾಗೂ ಹಲವಾರು ಸಂಧರ್ಭಗಳಲ್ಲಿ ಸಂಪೂರ್ಣ ಗುಣಪಡಿಸಲು ಅವಕಾಶವಿರುತ್ತದೆ ಎಂಬುದಾಗಿ ಹೇಳಿದರು.
ಮಕ್ಕಳ ವೈದ್ಯರಾದ ಡಾ ಪ್ರಮೋದ ಪಡಸಾಲಿ ಅವರು ಮಕ್ಕಳಲ್ಲಿ ಕಂಡುಬರುವಂತಹ ಕ್ಯಾನ್ಸರಗಳ ಬಗ್ಗೆ ಮಾಹಿತಿ ನೀಡಿದರು, ದಂತ ವೈದ್ಯರಾದ ಡಾ ಸವಿತಾ ಅವರು ಬಾಯಿಗೆ ಸಂಬಂಧಿಸಿದ ಆರ್ಬುದ ರೋಗಗಳ ಬಗ್ಗೆ ಮಾಹಿತಿ ನೀಡಿದರು, ಶ್ರೀ ರೇಣುಕಾ ಡಯಾ ಗನೋಸ್ಟಿಕ್ಸ್ ಲ್ಯಾಬರೋಟರಿ ಮತ್ತು ಆರ್. ಸಿ. ಸಿಬ್ಬಂದಿಗಳು , ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇದೆ ಸಂಧರ್ಭದಲ್ಲಿ ಆಗಿನ ಹೈದ್ರಾಬಾದ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಭಾರತಕ್ಕೆ ಸೇರೆ್ಡಮಾಡುವ ಹೋರಾಟದಲ್ಲಿ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ ಭಾಯ್ ಪಟೇಲಜೀ ಹಾಗೂ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆ ಹಾಗೂ ಸ್ವಾಮೀ ರಾಮಾನಂದ ತೀರ್ಥ ಸಾಮಾಜಿಕ ಆರ್ಥಿಕ ರಾಷ್ಟ್ರ್ರೀಯ ಭಾವೈಕ್ಯತೆ ಮತ್ತು ಸಂಶೋಧನಾ ಸಂಸ್ಥೆ, ಹುಟ್ಟುಹಾಕಿದ ಮಾಜಿ ಪ್ರಧಾನಿ ಪಿ, ವಿ ,ನರಸಿಂಹರಾವ್ ಹಾಗೂ ನಮ್ಮ ರಾಷ್ಟ್ರದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಇವರನ್ನು ಹಾಗೂ ಆಗಿನ ಸಂಸ್ಥೆಯ ಇನ್ನೋರ್ವ ಪದಾಧಿಕಾರಿ ಕಲ್ಯಾಣಕರ್ನಾಟಕದ ಸಾಹಿತ್ಯ ಸಂತ ಶುಭ ಹಾರಯಿಕೆಯ ಕವಿ ಪ್ರೊ.ವಸಂತ ಕುಷ್ಟಗಿಯರನ್ನು ಆದರಗಳೊಂದಿಗೆ ನೆನಪಿಸಿಕೊಳ್ಳಲ್ಲಾಯಿತು. ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಅರೋಗ್ಯ ಸಹಕಾರದ ಲಲಿತ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು ಮತ್ತು ವಂದನಾರೆ್ಣಯನ್ನು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಾಹಿದ್ ಸಲ್ಲಿಸಿದರು.