'ರಚನಾ -2019' ವಿದ್ಯಾಥರ್ಿಗಳಿಗೆ ಕಾರ್ಯಾಗಾರ
ಲೋಕದರ್ಶನ ವರದಿ
ಬೆಳಗಾವಿ 26: ನಗರದ ಉದ್ಯಮಬಾಗದಲ್ಲಿರುವ ಕೆ.ಎಲ್.ಇ. ಯ ಎಂ.ಎಸ್. ಶೇಷಗಿರಿ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜನಿಯರಿಂಗ್ ವಿಭಾಗದವರು "ರಚನಾ -2019" ಇದೇ ದಿನಾಂಕ 25 ಹಾಗೂ 26 ರಂದು ಮಹಾವಿದ್ಯಾಲಯದ ಸಿಲ್ವರ್ ಜುಬಲಿ ಸಭಾ ಭವನದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಬೇರೆ ಬೇರೆ ಕಾಲೇಜುಗಳಿಂದ ಸುಮಾರು 150 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಟ್ಟಡದ ವಾಸ್ತು ಯೋಜನೆ, ಕಟ್ಟಡ ಸೌಂದರ್ಯಶಾಸ್ತ್ರ, ನೂತನ ಭೂಮಾಪ ಹೊಸ ಹೊಸತ ತಂತ್ರಜ್ಞಾನಗಳ ಕುರಿತು ತಿಳುವಳಿಕೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏರ್ಪೋಟ್ರ್ಸ ಅಥಾರಟಿ ಆಫ್ ಇಂಡಿಯಾದ ನಿದರ್ೇಶಕರಾದ ರಾಜೇಶ ಮೌರ್ಯ ಮಾತನಾಡುತ್ತ, ಸಿವಿಲ್ ಇಂಜನಿಯರಿಂಗ್ ವಿದ್ಯಾಥರ್ಿಗಳಾದ ನೀವು ಕೇವಲ ಪಠ್ಯ ಪುಸ್ತಕದ ಹುಳುಗಳಾದರೆ ಸಾಲದು. ನಿಜವಾಗಿ ಹೊರಜಗತ್ತಿನಲ್ಲಿ ಅವುಗಳನ್ನು ಪ್ರತ್ಯಕ್ಷವಾಗಿ ಪ್ರಯೋಗ ಮಾಡುತ್ತ ಹೋದಾಗ ಮಾತ್ರ ನೀವೊಬ್ಬ ಯಶಸ್ವಿ ಇಂಜನಿಯರಾಗಲು ಸಾಧ್ಯ ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ. ಬಸವರಾಜ ಜಿ. ಕಟಗೇರಿಯವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತ ಹೊಸ ಹೊಸ ಪ್ರಯೋಗಗಳೊಂದಿಗೆ ನಿಮ್ಮ ಬುದ್ದಿಮತ್ತೆಯನ್ನು ಬೆಳೆಯಿಸಿಕೊಳ್ಳಿ ಎಂದು ಹೊಸ ಪಿಳಿಗೆಗೆ ತಿಳಿ ಹೇಳಿದರು.
ಶಿಬಿರದ ಸಂಕ್ಷಿಪ್ತ ಪರಿಚಯವನ್ನು ಪ್ರೊ. ಹನುಮಂತ ಮಾಡಿಕೊಟ್ಟರು. ಶ್ರೀಮತಿ ಚಿನಿವಾಲರ ಅತಿಥಿಗಳನ್ನು ಪರಿಚಯಿಸಿದರು. ಡಾ. ಆರ್.ವಿ. ರಾಯಕರ ಅತಿಥಿಗಳನು, ಶಿಬೀರಾಥರ್ಿಗಳನ್ನು ಸ್ವಾಗತಿಸಿದರು. ಪ್ರೊ. ನಿಖಿಲ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 