ಕತ್ತಲೆ ಇದ್ದಾಗ ಬೆಳಕಿನ ಮಹತ್ವ ತಿಳಿಯುತ್ತದೆ: ಸದಾಶಿವ ಶ್ರೀಗಳು
ಲೋಕದರ್ಶನ ವರದಿ
ಹಾವೇರಿ 04: ಕತ್ತಲೆ ಇದ್ದಾಗ ಬೆಳಕಿನ ಮಹತ್ವ ತಿಳಿಯುತ್ತದೆ ಎಂದು ವಿನಾಯಕ ನಗರದಲ್ಲಿ ಬನ್ನಿಮಹಂಕಾಳಿ ಕಾತರ್ಿಕೋತ್ಸವ ನಗರದ ಹುಕ್ಕೇರಿ ಮಠದ ಸದಾಶಿವ ಸ್ವಾಮಿಜಿಯವರು ಹೇಳಿದರು.
ಪೂಜ್ಯ ಸ್ವಾಮಿಜಿಯವರು ವಿನಾಯಕ ನಗರದಲ್ಲಿನ ಜನರು ನಗರವನ್ನು ಸ್ವಚ್ಚವಾಗಿಟ್ಟುಕೊಂಡು ಇತರಿಗೆ ಮಾದರಿಯಾಗಿದ್ದಾರೆ,ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ, ಮಾಡುವ ಕಾಯಕವು ಸತ್ಯ, ಶುದ್ದ, ನಂಬಿಕೆ , ನಿಷ್ಟೆ ಇದ್ದರೆ ನಾವು ನಾಗರಿಕ ಸಮಾಜಕ್ಕೆ ಪೂರಕ ಎಂದರು. ವಿವಿಧ ಕ್ಷೇತ್ರದ ಸಾಧಕರಾದ ಬಸವಣ್ಣೆಪ್ಪ ಅತ್ತಿಗೇರಿ, ಆಯ್ ಎಮ್ ಪತ್ರಿ, ಎಸ್ ಬಿ ಗಂಜಿಗಟ್ಟಿ ಎನ್ ಬಿ ಕಾಳೆ , ಆಂಜನೇಯ ಹುಲ್ಯಾಳ, ಸಾಲಂಕಿ, ಸುಶಾಂತ ತಿಮ್ಮಾಪುರ, ವೀರಭದ್ರಪ್ಪ ಮೆಣಸಿನ ಕಾಯಿಯವರನ್ನು ಸನ್ಮಾನಿಸಲಾಯಿತು. ಶಾಸಕರಾದ ನೆಹರೂ ಓಲೆಕಾರ ಮಾತನಾಡಿ ವಿನಾಯಕ ನಾಗರಿಕ ವೇದಿಕೆಯಿಂದ 300 ಗಿಡಗಳನ್ನು ಹಚ್ಚಿದ್ದಾರೆ. ಮೇಲಾಗಿ ಸಂರಕ್ಷಣೆಮಾಡುತ್ತಾ ಪರಿಸರ ಪ್ರೇಮಿಗಳಾಗಿ , ಇಲ್ಲಿನ ನಾಗರಿಕರು ಪ್ರಬುದ್ದರಾಗಿದ್ದಾರೆ ಎಂದರು. ಈ ಅವಧಿಯಲ್ಲಿ ಚನ್ನವೀರಪ್ಪನವರು ಎಸ್ ಎಮ್ ಬಡಿಗೇರ್ ಎನ್ ಬಿ ಕಾಳೆ ಆಯ್ ಎಮ್ ಪತ್ರಿ ಸುಧಾಬಾಯಿ ತೆಪ್ಪದ ಕೊಟ್ರಯ್ಯ ನಡುವಿನಮಠ ನಾಗರಿಕ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 