ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ನೀರು: ರೈತರಲ್ಲಿ ಸಂತಸ
ಮಾಂಜರಿ ದಿ4: ನೆರೆಯ ಮಹಾರಾಷ್ಟ್ರದ ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ಕೊನೆಯ ಕಂತಿನ ಆರ್ಧ ಟಿ.ಎಮ್.ಸಿ ನೀರು ಸುಳಕೂಡ ಬಾಂದಾರದಿಂದ ಬಿಡುಗಡೆ ಮಾಡಿರುವುದರಿಂದ ದೂಧಗಂಗಾ ನದಿಯ ದಂಡೆಯ ರೈತರಿಗೆ ಸಂತಸ ಮೂಡಿಸಿದೆ.
ಕಳೆದ ಏರಡು ವಾರಗಳಿಂದ ದೂಧಗಂಗಾ ನದಿಯು ಸಂಪೂರ್ಣ ಬರಿದಾಗಿ ರೈತರು ಮತ್ತು ಜಾನುವಾರುಗಳು ನೀರಿನ ತೊಂದರೆ ಅನುಭವಿಸುವ ಪ್ರಸಂಗ ಬಂದೂದಗಿತ್ತು, ಆದರೆ ದೂಧಗಂಗಾ ನದಿಗೆ ನೀರು ಹರಿದು ಬರುತ್ತಿರುವುದರಿಂದ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ. ದೂಧಗಂಗಾ ನದಿಗೆ ಕಾಳಮ್ಮಾವಾಡಿ ಜಲಾಶಯದಿಂದ ಬಿಡುವ ನೀರು ಪ್ರಸಕ್ತ ಸಾಲಿನ ಕಂತುಗಳು ಮುಕ್ತಾಯವಾಗಿದ್ದು, ನದಿಯಲ್ಲಿ ಮಳೆಯ ಹೊಸ ನೀರು ಬರುವವರೆಗೆ ಕಾಯುವ ಪ್ರಸಂಗ ನದಿ ತೀರದ ಜನತೆಗೆ ಬಂದೊದಗಿದೆ.
ಬೇಸಿಗೆ ಆರಂಭವಾದಾಗಿನಿಂದ ಇಹೊತ್ತಿನವರೆಗೆ ಮಳೆ ಸುರಿಯದೆ ಇರುವುದರಿಂದ ರೈತರಲ್ಲಿ ನಿರಾಶೆ ಮೂಡಿಸಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ, ಬಿಸಲಿನ ಧಗೆಗೆ ಬೆಳೆದ ಪೈರುಗಳು ಬಾಡಿಹೊಗುತ್ತಿದ್ದವು, ನದಿಗೆ ನೀರು ಬಂದಿರುವುದರಿಂದ ಸ್ವಲ್ಪ ಜೀವ ಬಂದಂತಾಗಿದೆ.
ದೂಧಗಂಗಾ ನದಿಯ ದಂಡೆಯ ಬಾರವಾಡ, ಮಾಂಗೂರ, ಕಾರದಗಾ, ಜನವಾಡ, ಸದಲಗಾ, ಮಲಿಕವಾಡ ಮತ್ತು ಯಕ್ಸಂಬಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತುತರ್ು ಬಗೆಹರಿದಂತಾಗಿದೆ. ಬಿಡುಗಡೆ ಮಾಡಿರುವ ನೀರಿನ ಹರಿವು ಮಂದಗತಿಯಲ್ಲಿದ್ದು, ನೀರು ಸದಲಗಾ ದಾಟಿದ್ದು, ಮಲಿಕವಾಡ, ಯಕ್ಸಂಬಾ ಪಟ್ಟಣದ ವರಗೆ ನೀರು ಮುಟ್ಟುವ ನೀಟ್ಟಿನಲ್ಲಿ ನದಿ ತೀರದ ವಿದ್ಯೂತ್ ಕಡಿತ ಗೊಳಿಸಿದ್ದು, ಇನ್ನು ಯಕ್ಸಂಬಾ ಪಟ್ಟಣಕ್ಕೆ ನೀರು ಮುಟ್ಟಬೇಕಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 