ಉಮರೇ, ಗಲಗಲಿ, ಶಾಮಲಾದೇವಿ ಶಿವಯ್ಯಗೆ ಸನ್ಮಾನ
Umar, Galagali, Shamaladevi Shivayya's tribute
ಉಮರೇ, ಗಲಗಲಿ, ಶಾಮಲಾದೇವಿ ಶಿವಯ್ಯಗೆ ಸನ್ಮಾನ
ಸಂಬರಗಿ 08: ಖಿಳೇಗಾಂವ ಗ್ರಾಮದ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಖ್ಯ ವ್ಯವಸ್ಥಾಪಕ ಸುನಿಲ್ ಉಮರೇ ಮ್ಯಾನೇಜರ ಆಗಿ ಬಡ್ತಿ ಹೊಂದಿದ್ದು, ಜಿಲ್ಲಾ ಕೇಂದ್ರ ಬ್ಯಾಂಕ್ ನೀರೀಕ್ಷಕ ರಮೇಶ್ ಗಲಗಲಿ ಅವರು ಬ್ಯಾಂಕ್ಗೆ ಭೇಟಿ ನೀಡಿದ ನಿಮಿತ್ತ ಮತ್ತು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಸ್ತಿ ನಿಲಯದ ಅಡುಗೆಯವರಾದ ಶಾಮಲಾದೇವಿ ಶಿವಯ್ಯ ಅವರ ನಿವೃತ್ತಿ ಹೊಂದಿದ ನಿಮಿತ್ತ ಈ ಮೂವರನ್ನು ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಸತೀಶ್ ಹೊಣ್ಣಾಗೋಳು ಹಾಗೂ ಇನ್ನಿತರ ಕಮಿಟಿ ಪದಾಧಿಕಾರಿಗಳು ಸತ್ಕರಿಸಿದರು. ಸಂಘದ ನೂತನ ವ್ಯವಸ್ಥಾಪಕ ಸುನಿಲ್ ಉಮರೇ ಮಾತನಾಡಿ ಎಲ್ಲಾ ಸದಸ್ಯರು ನನಗೆ ಜವಾಬ್ದಾರಿಯನ್ನು ವಹಿಸಿದ್ದಾರೆ ಮತ್ತು ಅದನ್ನು ಪ್ರಾಮಾಣಿಕವಾಗಿ ಅನುಸರಿಸುವ ಮೂಲಕ ಎಲ್ಲಾ ಸದಸ್ಯರು ಮತ್ತು ರೈತರಿಗೆ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು. ಯಾವುದೇ ಸಮಸ್ಯೆ ಇದ್ದರೆ, ನಾನು ನಿಮ್ಮ ಸಹಾಯವನ್ನು ತೆಗೆದುಕೊಂಡು ಆ ಸಮಸ್ಯೆಯನ್ನು ಪರಿಹರಿಸುತ್ತೇನೆ. ಎಲ್ಲರ ಸಹಕಾರ ಅತ್ಯಗತ್ಯ. ಈ ಸನ್ಮಾನ ನನ್ನದಲ್ಲ, ಎಲ್ಲರದ್ದೆಂದು ಎಲ್ಲರೂ ಇದೆ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್ ಹೋನ್ನಾಗೋಳ, ಸಂಜಯ್ ಉಮರೇ, ಗಣೇಶ್ ಹೊನ್ನಾಗೋಳ, ರಾಜು ಬಗಲಿ, ರಮೇಶ್ ಪಾಟೀಲ್ ದರ್ಯಪ್ಪ ದಿವಾನಗೋಳ, ಅಣ್ಣಪ್ಪ ಕಡಿಮನಿ, ರವಿ ನಾಗಗೋಳ, ಅನೇಕ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 